Singer Chinmayi Sripada viral : ಖ್ಯಾತ ನಟ ಜಾನ್ ವಿಜಯ್ ಅವರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಗಾಯಕಿ ಚಿನ್ಮಯಿ ಆರೋಪ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಸಂದರ್ಶನಕ್ಕೆಂದು ತೆರಳಿದ್ದ ಮಹಿಳಾ ಪತ್ರಕರ್ತೆಯ ಜತೆ ಅನುಚಿತವಾಗಿ ವರ್ತಿಸಿದ್ದರು ಎಂದು ಸಿಂಗರ್ ದೂರಿದ್ದಾರೆ.. ಅಲ್ಲದೆ, ಈ ನಟನ ವಿಚಿತ್ರ ವರ್ತನೆಯ ಬಗ್ಗೆ ಇತರ ಮಹಿಳೆಯರು ಸಹ ತಮ್ಮ ಹೇಳಿಕೊಂಡಿದ್ದಾರೆ ಎಂದು ಗಾಯಕಿ ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಕೆಲವು ಸ್ಕ್ರೀನ್ಶಾಟ್ಗಳನ್ನು ಚಿನ್ಮಯಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜಾನ್ ವಿಜಯ್ ಕೆಲಸದ ಸ್ಥಳಗಳು, ಪಬ್ಗಳು ಮತ್ತು ರೆಸ್ಟೋರೆಂಟ್ಗಳಲ್ಲಿ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿರುವುದು ಈ ಪೋಸ್ಟ್ನಲ್ಲಿದೆ.. ಇದನ್ನೂ ಓದಿ: ವಯಸ್ಸು 43, 2 ಮಕ್ಕಳಿದ್ರೂ ಸಖತ್ ಹಾಟ್, ಆದ್ರೆ ಸಿಂಗಲ್..! ದೇಶದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆವ ಸುಂದರಿ ಈಕೆ ಇನ್ನು ಚಿನ್ಮಯಿ ಅವರ ಪೋಸ್ಟ್ಗೆ ಕೆಲವು ಯುವತಿಯರೂ ಸಹ ಪ್ರತಿಕ್ರಿಯಿಸಿದ್ದಾರೆ. ಪಬ್ಗಳು ಮತ್ತು ಕ್ಲಬ್ಗಳಲ್ಲಿ ಈ ನಟ ಅನುಚಿತವಾಗಿ ವರ್ತಿಸುತ್ತಾರೆ, ಸೆಲೆಬ್ರಿಟಿಗಳಂತೆ ನಟಿ ಎಲ್ಲರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ ಎಂದು ನಟನ ಮೇಲೆ ಆರೋಪ ಮಾಡುತ್ತಿದ್ದಾರೆ. ಅಲ್ಲದೆ, ಮಹಿಳೆಯನ್ನು ಒಬ್ಬಂಟಿಯಾಗಿ ಕಂಡರೆ, ಹುಚ್ಚನಂತೆ ವರ್ತಿಸುತ್ತಾನೆ ಎಂದು ಈ ಪೋಸ್ಟ್ನಲ್ಲಿ ಕಾಮೆಂಟ್ ಮಾಡಿದ್ದಾರೆ.. After The Newsminute report about the Sexual Assault case of Malayalam cinema also mentioned John Vijay for his misdemeanour with the journalist There are other women speaking about his behaviour in general. pic.twitter.com/AfeLgdC0lY — Chinmayi Sripaada (@Chinmayi) July 26, 2024 ಜಾನ್ ವಿಜಯ್ ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ನಟಿಸಿದ್ದಾರೆ. ಖಳನಟನಾಗಿ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಮಿಂಚಿದ್ದಾರೆ. 'ಸರ್ಪಟ್ಟ ಪರಂಬರೈ', 'ಸಲಾರ್: ಭಾಗ 1- ಕದನ ವಿರಾಮ' ಸೇರಿದಂತೆ ಮುಂತಾದ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ ಚಿರಂಜೀವಿ ಅಭಿನಯದ ವಾಲ್ತೇರು ವೀರಯ್ಯ ಚಿತ್ರದಲ್ಲಿ ಜಾನ್ ವಿಜಯ್ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. None
Popular Tags:
Share This Post:
What’s New
Spotlight
Today’s Hot
-
- October 16, 2024
-
- October 16, 2024
-
- October 16, 2024
Daily GK Quiz: "ಯುದ್ಧ ಮತ್ತು ಶಾಂತಿ" ಕಾದಂಬರಿಯನ್ನು ಬರೆದವರು ಯಾರು?
- By Sarkai Info
- October 16, 2024
Featured News
Latest From This Week
ಡಯಟ್ ಮಾಡಿದರೂ ತೂಕ ಹೆಚ್ಚಾಗುತ್ತಿದೆಯೇ..? ಅದಕ್ಕೆ ಈ 5 ಕಾರಣಗಳು ಇರಬಹುದು..!
KANNADA
- by Sarkai Info
- October 16, 2024
ಪ್ರತಿದಿನ 10 ನಿಮಿಷಗಳ ಕಾಲ ತೆರೆದ ಗಾಳಿಯಲ್ಲಿ ಕುಳಿತುಕೊಳ್ಳಿ, ನಿಮಗೆ ಈ 5 ಪ್ರಯೋಜನಗಳು ಸಿಗಲಿವೆ..!
KANNADA
- by Sarkai Info
- October 16, 2024
Renukaswamy Murder Case: ನಟ ದರ್ಶನ್ ಬೇಲ್ ಬಗ್ಗೆ ಕೋಡಿಶ್ರೀಗಳ ಸ್ಫೋಟಕ ಭವಿಷ್ಯ!
KANNADA
- by Sarkai Info
- October 16, 2024
Subscribe To Our Newsletter
No spam, notifications only about new products, updates.