Rama Ekadashi 2024: ಏಕಾದಶಿಯ ಉಪವಾಸವನ್ನು ಭಗವಾನ್ ವಿಷ್ಣುವಿಗೆ ಸಮರ್ಪಿಸಲಾಗಿದೆ. ಈ ದಿನದಂದು ನಾರಾಯಣ ದೇವರನ್ನು ಪೂಜಿಸುವುದರಿಂದ ಭಕ್ತರ ಎಲ್ಲಾ ತೊಂದರೆಗಳು ದೂರವಾಗುತ್ತವೆ. ಒಂದು ವರ್ಷದಲ್ಲಿ ಒಟ್ಟು 24 ಏಕಾದಶಿಗಳು ಬರುತ್ತವೆ. ಅಧಿಕಮಾಸಗಳು ಸಂಭವಿಸಿದಾಗ 26 ಏಕಾದಶಿಗಳು ಸಂಭವಿಸುತ್ತವೆ. ಇವುಗಳಲ್ಲಿ ಕಾರ್ತಿಕ ಮಾಸದಲ್ಲಿ ಬರುವ ಏಕಾದಶಿ ವ್ರತದ ಮಹತ್ವ ಇನ್ನಷ್ಟು ಹೆಚ್ಚುತ್ತದೆ. ವಾಸ್ತವವಾಗಿ ಕಾರ್ತಿಕ ಮಾಸವನ್ನು ವಿಷ್ಣುವಿನ ಆರಾಧನೆಗೆ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಕಾರ್ತಿಕ ಮಾಸದಲ್ಲಿ ಶ್ರೀ ಹರಿಯನ್ನು ಪೂಜಿಸುವುದರಿಂದ ಮನೆಯಲ್ಲಿ ಸುಖ, ಸಂಪತ್ತು ಮತ್ತು ಸಮೃದ್ಧಿ ನೆಲೆಸುತ್ತದೆ. ಇದರೊಂದಿಗೆ ತಾಯಿ ಲಕ್ಷ್ಮಿದೇವಿಯಯ ಆಶೀರ್ವಾದವೂ ದೊರೆಯುತ್ತದೆ. ರಾಮ ಏಕಾದಶಿ ದಿನಾಂಕ ಮತ್ತು ಸಮಯ ಪ್ರತಿ ವರ್ಷವೂ ಕಾರ್ತಿಕ ಮಾಸ ದ ಕೃಷ್ಣ ಪಕ್ಷದ ಏಕಾದಶಿಯಂದು ರಾಮ ಏಕಾದಶಿಯ ಉಪವಾಸವನ್ನು ಆಚರಿಸಲಾಗುತ್ತದೆ. ಈ ವರ್ಷ ರಾಮ ಏಕಾದಶಿಯನ್ನು ಅಕ್ಟೋಬರ್ 28ರಂದು ಆಚರಿಸಲಾಗುತ್ತದೆ. ಏಕಾದಶಿ ತಿಥಿ ಅಕ್ಟೋಬರ್ 27ರಂದು ಬೆಳಗ್ಗೆ 5.23ಕ್ಕೆ ಪ್ರಾರಂಭವಾಗಲಿದೆ. ಏಕಾದಶಿ ತಿಥಿ ಅಕ್ಟೋಬರ್ 28ರಂದು ಬೆಳಗ್ಗೆ 7.50ಕ್ಕೆ ಕೊನೆಗೊಳ್ಳುತ್ತದೆ. ಆದರೆ ರಾಮ ಏಕಾದಶಿಯನ್ನು ಅಕ್ಟೋಬರ್ 29ರಂದು ಆಚರಿಸಲಾಗುತ್ತದೆ. ಇದನ್ನೂ ಓದಿ: ಗುರು ಪುಷ್ಯ ಯೋಗ... ಈ ರಾಶಿಯವರನ್ನು ಇನ್ನು ತಡೆಯೋರಿಲ್ಲ, ಅಂದುಕೊಂಡಿದ್ದೆಲ್ಲ ಈಡೇರುವ ಗೋಲ್ಡನ್ ಟೈಮ್! ಈ ವಸ್ತುಗಳನ್ನು ದಾನ ಮಾಡಿ ಕಾರ್ತಿಕ ಮಾಸದಲ್ಲಿ ಬರುವ ಏಕಾದಶಿಗೆ ವಿಶೇಷ ಮಹತ್ವವಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಮಾಸದಲ್ಲಿ ಬರುವ ರಾಮ ಏಕಾದಶಿಯ ದಿನದಂದು ಕೆಲವು ವಸ್ತುಗಳನ್ನು ದಾನ ಮಾಡಬೇಕು. ಕಾರ್ತಿಕದಲ್ಲಿ ಈ ವಸ್ತುಗಳನ್ನು ದಾನ ಮಾಡುವುದರಿಂದ ಅಪಾರ ಸುಖ-ಸಂಪತ್ತು ಮತ್ತು ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಇದಲ್ಲದೆ ಯಾವುದೇ ವ್ಯಕ್ತಿಯು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾನೆ. ಹಾಗಾದರೆ ಏಕಾದಶಿಯ ದಿನದಂದು ವಿಷ್ಣುವಿನ ವಿಶೇಷ ಅನುಗ್ರಹವನ್ನು ಪಡೆಯಲು ಏನನ್ನು ದಾನ ಮಾಡಬೇಕು..? ಅನ್ನೋದರ ಬಗ್ಗೆ ತಿಳಿಯಿರಿ.. * ಧಾನ್ಯ * ಹಣ (ಸಾಮರ್ಥ್ಯದ ಪ್ರಕಾರ) * ಹಳದಿ ಬಟ್ಟೆ * ನವಿಲು ಗರಿ * ತುಳಸಿ ಗಿಡಗಳು * ಕಾಮಧೇನು ಹಸು * ಹಣ್ಣು * ಮುರಳಿ ಇದನ್ನೂ ಓದಿ: ಬಾತ್ರೂಮ್ನಲ್ಲಿ ಈ ಒಂದು ವಸ್ತು ಇದ್ರೆ ಮನೆಯಲ್ಲಿ ಸಂತೋಷದ ಜೊತೆಗೆ ಹಣವೂ ಉಕ್ಕುತ್ತೆ...! (ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆ ಮತ್ತು ಜಾನಪದ ನಂಬಿಕೆಗಳನ್ನು ಆಧರಿಸಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. Kannada News ಇದನ್ನು ದೃಢಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. None
Popular Tags:
Share This Post:
ಈ ಭಾರಿಯೂ RCB ಕೈ ತಪ್ಪುತ್ತಾ ಕಪ್..? ಕರ್ನಾಟಕ ಸರ್ಕಾದಿಂದ ಈ ನಿಯಮ ಪಾಲಿಸುವಂತೆ ತಂಡಕ್ಕೆ ಬಾರಿ ಒತ್ತಡ..!
October 22, 2024What’s New
Spotlight
Today’s Hot
Featured News
Latest From This Week
Daily GK Quiz: "ಯುದ್ಧ ಮತ್ತು ಶಾಂತಿ" ಕಾದಂಬರಿಯನ್ನು ಬರೆದವರು ಯಾರು?
KANNADA
- by Sarkai Info
- October 16, 2024
ಸೋಫಾ ಕಲೆಗಳನ್ನು ತೆಗೆದುಹಾಕಲು ಈ ಮೂರು ಟಿಪ್ಸ್ ಗಳಲ್ಲಿ ಒಂದನ್ನು ಪ್ರಯತ್ನಿಸಿದರೆ ಸಾಕು..!
KANNADA
- by Sarkai Info
- October 16, 2024
Subscribe To Our Newsletter
No spam, notifications only about new products, updates.