Mayank Yadav: ಸದ್ಯ ವಿಶ್ವದ ಅತಿ ವೇಗದ ಬಾಲ್ ಎಸೆದ ದಾಖಲೆ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಹೆಸರಿನಲ್ಲಿದೆ. ಅಖ್ತರ್ 2003ರ ವಿಶ್ವಕಪ್ನಲ್ಲಿ ಇಂಗ್ಲೆಂಡ್ ವಿರುದ್ಧ ಮಾಡಿದ ಬೌಲಿಂಗ್, ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಬೌಲಿಂಗ್ ಎನಿಸಿಕೊಂಡಿದೆ. ಇನ್ನು ಶೋಯೆಬ್ ಅಖ್ತರ್ ಎಸೆದ ಆ ಚೆಂಡಿನ ವೇಗ ಗಂಟೆಗೆ 161.3 ಕಿ.ಮೀ. ಇತ್ತು. ಇಲ್ಲಿಯವರೆಗೂ ಯಾವುದೇ ಬೌಲರ್ ಶೋಯೆಬ್ ಅಖ್ತರ್ ಅವರ ಈ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾಗಿಲ್ಲ. ಆದರೆ ಓರ್ವ ಬೌಲರ್ ಮಾತ್ರ ಆ ದಾಖಲೆ ಮುರಿಯುವ ಸಾಮಾರ್ಥ್ಯ ಹೊಂದಿದ್ದಾನೆ. ಇದನ್ನೂ ಓದಿ: ತನ್ನನು ಕಚ್ಚಲು ಬಂದ ನಾಗರಹಾವಿನ ಹೆಡೆಯನ್ನೇ ಹಿಡಿದು ಕಚ್ಚಿದ ಭೂಪ... ಇದಕ್ಕೆ ನೀವೇನಾದ್ರೂ ಹೆಸರಿಡ್ತೀರಾ... ವಿಡಿಯೋ ನೋಡಿ ಹೇಳಿ... ಆ ಬೌಲರ್ ಬೇರೆ ಯಾರೂ ಅಲ್ಲ ಭಾರತದ ವೇಗಿ ಮಯಾಂಕ್ ಯಾದವ್. ಮಯಾಂಕ್ ಯಾದವ್ ಬಾಲ್ಯದಿಂದಲೂ ಜೆಟ್ ವಿಮಾನ, ರಾಕೆಟ್ ಮತ್ತು ಸೂಪರ್ ಬೈಕ್ಗಳ ವೇಗದಿಂದ ಪ್ರಭಾವಿತರಾಗಿದ್ದರಂತೆ. ಐಪಿಎಲ್ 2024 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡುತ್ತಿರುವಾಗ ಮಯಾಂಕ್ ಯಾದವ್ ಅತ್ಯಂತ ವೇಗದ ಚೆಂಡನ್ನು ಬೌಲ್ ಮಾಡುವ ಮೂಲಕ ಸಂಚಲನ ಮೂಡಿಸಿದ್ದರು. ಅಂದು RCB ವಿರುದ್ಧದ ಪಂದ್ಯದಲ್ಲಿ ಮಯಾಂಕ್ 156.7 kmph ವೇಗದಲ್ಲಿ ಚೆಂಡನ್ನು ಬೌಲ್ ಮಾಡಿದ್ದರು. ಮಯಾಂಕ್ ಯಾದವ್ ಗಂಟೆಗೆ 156 ಕಿ.ಮೀ ವೇಗದಲ್ಲಿ ಚೆಂಡನ್ನು ಎಸೆದಿದ್ದಾರೆ. ಮಯಾಂಕ್ ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನವನ್ನು ಪ್ರಾರಂಭಿಸಿದರು. ಭಾರತ ಪರ 3 ಟಿ20 ಪಂದ್ಯಗಳನ್ನಾಡಿರುವ ಮಯಾಂಕ್ ಯಾದವ್ 4 ವಿಕೆಟ್ ಕಬಳಿಸಿದ್ದಾರೆ. ಅಂದಹಾಗೆ ಮಯಾಂಕ್ ಯಾದವ್ ತಮ್ಮ ವೇಗವನ್ನು ಮತ್ತಷ್ಟು ಹೆಚ್ಚಿಸಿಕೊಂಡರೆ, ಒಂದಲ್ಲ ಒಂದು ದಿನ ಶೋಯೆಬ್ ಅಖ್ತರ್ ಅವರ ವಿಶ್ವ ದಾಖಲೆಯನ್ನು ಮುರಿಯಬಹುದು ಎನ್ನಲಾಗುತ್ತಿದೆ. ಇದನ್ನೂ ಓದಿ: "ಸಲ್ಮಾನ್ ಖಾನ್ ಬದುಕಬೇಕೆಂದರೆ ಇರೋದು ಒಂದೇ ದಾರಿ"- ಬಿಷ್ಣೋಯ್ ಗ್ಯಾಂಗ್ನಿಂದ ಸಂಚಲನಕಾರಿ ಹೇಳಿಕೆ ಮಯಾಂಕ್ ಯಾದವ್ ಹುಟ್ಟಿದ್ದು ದೆಹಲಿಯಲ್ಲಿ ಆದರೆ ಅವರ ನಿಕಟತೆ ಹೆಚ್ಚಾಗಿರೋದು ಬಿಹಾರದ ಜೊತೆ. ಮಯಾಂಕ್ ಸುಪೌಲ್ನ ಮರೋನಾ ಬ್ಲಾಕ್ನ ರಾಥೋ ಗ್ರಾಮಕ್ಕೆ ಸೇರಿದವರು. ಅವರ ತಂದೆ ಪ್ರಭು ಯಾದವ್ ಅವರು ದೆಹಲಿಯ ಡ್ಯೂರಾ ಇಂಡಿಯಾ ಟೋನ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಸೈರನ್ ತಯಾರಿಕಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅದಕ್ಕೂ ಮುನ್ನ ಮಯಾಂಕ್ ಯಾದವ್ ಅವರ ತಂದೆ ಪ್ರಭು ಯಾದವ್ ಚಹಾ ಅಂಗಡಿಯಲ್ಲಿ ಮತ್ತು ಮೊಟ್ಟೆಯ ಅಂಗಡಿಯಲ್ಲಿ ಕೆಲಸ ಮಾಡಬೇಕಾಗಿತ್ತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ None
Popular Tags:
Share This Post:
ಈ ಭಾರಿಯೂ RCB ಕೈ ತಪ್ಪುತ್ತಾ ಕಪ್..? ಕರ್ನಾಟಕ ಸರ್ಕಾದಿಂದ ಈ ನಿಯಮ ಪಾಲಿಸುವಂತೆ ತಂಡಕ್ಕೆ ಬಾರಿ ಒತ್ತಡ..!
October 22, 2024What’s New
Spotlight
Today’s Hot
Featured News
Latest From This Week
Daily GK Quiz: "ಯುದ್ಧ ಮತ್ತು ಶಾಂತಿ" ಕಾದಂಬರಿಯನ್ನು ಬರೆದವರು ಯಾರು?
KANNADA
- by Sarkai Info
- October 16, 2024
ಸೋಫಾ ಕಲೆಗಳನ್ನು ತೆಗೆದುಹಾಕಲು ಈ ಮೂರು ಟಿಪ್ಸ್ ಗಳಲ್ಲಿ ಒಂದನ್ನು ಪ್ರಯತ್ನಿಸಿದರೆ ಸಾಕು..!
KANNADA
- by Sarkai Info
- October 16, 2024
Subscribe To Our Newsletter
No spam, notifications only about new products, updates.