KANNADA

ದಿನಭವಿಷ್ಯ 26-08-2024: ಈ ದಿನ ಸೋಮವಾರ ಕೃತಿಕಾ ನಕ್ಷತ್ರ ವ್ಯಾಘಾತ ಯೋಗದಲ್ಲಿ ಕೃಷ್ಣಜನ್ಮಾಷ್ಟಮಿ ನಿಮ್ಮ ರಾಶಿಗೆ ಹೇಗಿದೆ?

Somavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷಾ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿಯ ಈ ದಿನ ಸೋಮವಾರ ಕೃತಿಕಾ ನಕ್ಷತ್ರ ವ್ಯಾಘಾತ ಯೋಗ ಇರಲಿದೆ. ಇಂದು ಕೃಷ್ಣಜನ್ಮಾಷ್ಟಮಿಯು ಯಾವ ರಾಶಿಗೆ ಶುಭ ಫಲಗಳನ್ನು ತರಲಿದೆ ಎಂದು ತಿಳಿಯೋಣ... ಮೇಷ ರಾಶಿಯವರ ಭವಿಷ್ಯ (Aries Horoscope): ಕೃಷ್ಣಜನ್ಮಾಷ್ಟಮಿಯು ಈ ರಾಶಿಯ ಜನರಿಗೆ ಆದಾಯದ ಮೂಲಗಳನ್ನು ಹೆಚ್ಚಿಸಲಿದೆ. ನಿಮ್ಮ ಕೆಲಸಗಳಲ್ಲಿ ಪೋಷಕರ ಬೆಂಬಲದಿದ್ನ ಯಶಸ್ಸು, ದೂರದ ಪ್ರಯಾಣದಿಂದ ಲಾಭ ಸಾಧ್ಯತೆ ಇದೆ. ಶುಭ ಸುದ್ದಿಗಳಿಂದ ಮನಸ್ಸಿಗೆ ನೆಮ್ಮದಿ. ವೃಷಭ ರಾಶಿಯವರ ಭವಿಷ್ಯ (Taurus Horoscope): ಇಂದು ನಿಮ್ಮ ಕೆಲವು ತಪ್ಪುಗಳನ್ನು ಸರಿಪಡಿಸಿಕೊಂಡು ಹೋದರಷ್ಟೇ ಲಾಭ, ಇಲ್ಲವೇ ಭಾರೀ ನಷ್ಟವನ್ನು ಅನುಭವಿಸುವಿರಿ. ಅನಗತ್ಯವಾಗಿ ಹಣ ಖರ್ಚು ಮಾಡುವುದನ್ನು ತಪ್ಪಿಸಿ. ಯುವಕರು ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡುವರು. ಮಿಥುನ ರಾಶಿಯವರ ಭವಿಷ್ಯ (Gemini Horoscope): ಕೃಷ್ಣಜನ್ಮಾಷ್ಟಮಿಯ ಈ ದಿನ ನಿಮ್ಮ ಮನಸ್ಸು ಕೊಂಚ ಒತ್ತಡದಿಂದ ಕೂಡಿರಬಹುದು. ಹೂಡಿಕೆ ಸಂಬಂಧಿತ ವಿಚಾರಗಳಲ್ಲಿ ದೂರವೇ ಉಳಿದರೆ ಒಳಿತು, ಇಲ್ಲವೇ ಭಾರೀ ನಷ್ಟ. ಯಾವುದೇ ಕೆಲಸವನ್ನು ಪೂರ್ಣಗೊಳಿಸಲು ಕಠಿಣ ಪರಿಶ್ರಮ ಅಗತ್ಯ. ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): ಇಂದು ಕೆಲವು ಅನಿರೀಕ್ಷಿತ ಖರ್ಚುಗಳು ನಿಮ್ಮ ವೆಚ್ಚವನ್ನು ಹೆಚ್ಚಿಸಬಹುದು. ಕೆಲವರಿಗೆ ಕುಟುಂಬಕ್ಕೆ ಹೊಸ ಸದಸ್ಯರ ಆಗಮನದಿಂದ ಸಂತಸ. ಉದ್ಯೋಗದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ಮನ್ನಣೆ ದೊರೆಯಲಿದೆ. ಇದನ್ನೂ ಓದಿ- Shasha Rajyog: ದೀಪಾವಳಿ ನಂತರ ಈ ರಾಶಿಯವರ ಜೀವನದಲ್ಲಿ ಒಳ್ಳೆ ದಿನಗಳು ಆರಂಬಹ್, ಕೈತುಂಬಾ ಹಣ ಸಿಂಹ ರಾಶಿಯವರ ಭವಿಷ್ಯ (Leo Horoscope): ಯೋಚಿಸದೆ ಖರ್ಚು ಮಾಡುವ ನಿಮ್ಮ ಸ್ವಭಾವವು ಭವಿಷ್ಯದಲ್ಲಿ ಆರ್ಥಿಕ ಮುಗ್ಗಟ್ಟಿಗೆ ಕಾರಣವಾಗಬಹುದು. ಕುಟುಂಬದಲ್ಲಿ ಧನಾತ್ಮಕ ಸುದ್ದಿಗಳು ನಿಮ್ಮ ಮನಸ್ಸಿಗೆ ಸಂತೋಷವನ್ನು ನೀಡಲಿವೆ. ಕನ್ಯಾ ರಾಶಿಯವರ ಭವಿಷ್ಯ (Virgo Horoscope): ಆರೋಗ್ಯ ವಿಚಾರಗಳಲ್ಲಿ ಸುಧಾರಣೆಯನ್ನು ಕಾಣಬಹುದು. ನಿಮ್ಮಲ್ಲಿ ಕೆಲವರು ಭವ್ಯವಾದ ರಜೆಯನ್ನು ಆನಂದಿಸಲು ಸಿದ್ಧರಾಗಿರುವಿರಿ. ಇಂದು ಸಂಜೆ ವೇಳೆಗೆ ಶುಭ ಸಮಾರಂಭಗಳಲ್ಲಿ ಭಾಗವಹಿಸುವಿಕೆಯು ಮನಸ್ಸಿನ ಸಂತೋಷವನ್ನು ಇಮ್ಮಡಿಗೊಳಿಸಲಿದೆ. ತುಲಾ ರಾಶಿಯವರ ಭವಿಷ್ಯ (Libra Horoscope): ಹಣಕಾಸಿನ ವಿಚಾರದಲ್ಲಿ ಕೊಂಚ ಎಚ್ಚರಿಕೆ ಅಗತ್ಯವಾಗಿದೆ. ದೂರದ ಊರಿಗೆ ಪ್ರಯಾಣವು ಲಾಭದಾಯಕವಾಗಿರುತ್ತದೆ. ಕೆಲವರು ಕ್ರೀಡಾ ಚಟುವಟಿಕೆ ಅಥವಾ ಹವ್ಯಾಸವನ್ನು ಮುಂದುವರಿಸುವುದು ನಿಮ್ಮ ಮನಸ್ಸನ್ನು ಸಂತೋಷವಾಗಿರಿಸುತ್ತದೆ. ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope): ವಿವೇಚನಾಯುಕ್ತ ಖರ್ಚು ಮಾಡುವ ಮೂಲಕ ಹಣದ ಕೊರತೆಯನ್ನು ನೀಗಿಸುವಿರಿ. ಇಂದು ನೀವು ಕೈ ಹಾಕುವ ಕೆಲಸಗಳಲ್ಲಿ ಕೃಷ್ಣನ ಕೃಪೆಯಿಂದ ಯಶಸ್ಸನ್ನು ಕಾಣುವಿರಿ. ಕೃಷ್ಣಜನ್ಮಾಷ್ಟಮಿಯ ಈ ದಿನ ಕೆಲಸಕ್ಕೆ ಸಂಬಂಧಿಸಿದಂತೆ ಶುಭ ಸುದ್ದಿಗಳನ್ನು ಕೇಳುವಿರಿ. ಇದನ್ನೂ ಓದಿ- ಕೃಷ್ಣ ಜನ್ಮಾಷ್ಟಮಿಯಿಂದ ಈ ರಾಶಿಯವರಿಗೆ ಸುವರ್ಣಯುಗ ಪ್ರಾರಂಭ..! ಸಂತೋಷ, ಆರ್ಥಿಕ ಬಲ.. ಧನು ರಾಶಿಯವರ ಭವಿಷ್ಯ (Sagittarius Horoscope): ಕೃಷ್ಣಜನ್ಮಾಷ್ಟಮಿಯಂದು ಭಗವಾನ್ ಶ್ರೀ ಕೃಷ್ಣನ ಕೃಪೆಯಿಂದ ನಿಮ್ಮ ಆದಾಯದ ಮೂಲಗಳು ಹೆಚ್ಚಾಗಲಿವೆ. ವೃತ್ತಿ ರಂಗದಲ್ಲಿನ ಅಭಿವೃದ್ಧಿಯಲ್ಲಿ ನೀವು ಅಪಾರವಾದ ತೃಪ್ತಿಯನ್ನು ಪಡೆಯುವ ಸಾಧ್ಯತೆಯಿದೆ. ಮಕರ ರಾಶಿಯವರ ಭವಿಷ್ಯ (Capricorn Horoscope): ನಿಮ್ಮಲ್ಲಿ ಕೆಲವರು ಇಂದು ವ್ಯಾಪಕವಾದ ಪ್ರಯಾಣ ಕೈಗೊಳ್ಳಬೇಕಾಗಬಹುದು. ಆದಾಗ್ಯೂ, ಇಂದು ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯವಾಗಿದೆ. ಬಿಸಿನೆಸ್ ನಿಮಿತ್ತ ಬೇರೆಯವರ ಭೇಟಿ ಲಾಭದಾಯಕವಾಗಿದೆ. ಕುಂಭ ರಾಶಿಯವರ ಭವಿಷ್ಯ (Aquarius Horoscope): ಈ ರಾಶಿಯ ಜನರಿಗೆ ಇಂದು ಹೂಡಿಕೆಯಿಂದ ಭರ್ಜರಿ ಲಾಭ ಸಾಧ್ಯತೆ ಇದೆ. ಸಂಜೆ ವೇಳೆಗೆ ಮನೆಗೆ ಅತಿಥಿಗಳ ಆಗಮನವಾಗಲಿದ್ದು, ಮನಸ್ಸಿನ ಸಂತೋಷವನ್ನು ಹೆಚ್ಚಿಸಲಿದ್ದಾರೆ. ಆರೋಗ್ಯ ವಿಚಾರದಲ್ಲೂ ಉತ್ತಮ ದಿನ. ಮೀನ ರಾಶಿಯವರ ಭವಿಷ್ಯ (Pisces Horoscope): ಇಂದು ನಿಮ್ಮ ಸೋಮಾರಿತನವನ್ನು ಬಿಟ್ಟು ಮುಂದುವರೆದರಷ್ಟೇ ನಿಮಗೆ ಪ್ರಯೋಜನವಾಗಲಿದೆ. ಇಲ್ಲದಿದ್ದರೆ, ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತೆ ಇರುತ್ತದೆ. ವ್ಯಾಪಾರ ಸಂಬಂಧಿತ ಪ್ರಯಾಣವು ಲಾಭದಾಯಕವಾಗಿರಲಿದೆ. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. NEWS ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.