Yuva Rajkumar Sridevi Byrappa divorce reason: ಸ್ಯಾಂಡಲ್ವುಡ್ನಲ್ಲಿ ಯುವ ರಾಜ್ಕುಮಾರ್ ವಿಚ್ಛೇದನ ವಿಚಾರ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ. ಯುವ ರಾಜ್ಕುಮಾರ್ ಮತ್ತು ಪತ್ನಿ ಶ್ರೀದೇವಿ ಬೈರಪ್ಪ ಡಿವೋರ್ಸ್ ಪ್ರಕರಣ ಆರೋಪ - ಪ್ರತ್ಯಾರೋಪಗಳಿಂದ ಕೂಡಿದೆ. ಒಬ್ಬರ ಮೇಲೊಬ್ಬರು ಸಾಕಷ್ಟು ಆರೋಪಗಳನ್ನು ಮಾಡಿಕೊಂಡಿದ್ದು, ಇದು ಸಾಕಷ್ಟು ಸದ್ದು ಮಾಡುತ್ತಿದೆ. ಯುವ ರಾಜ್ಕುಮಾರ್ ಅವರು ಮಾಡಿರುವ ಆರೋಪಗಳಿಗೆ ಶ್ರೀದೇವಿ ಬೈರಪ್ಪ ತಮ್ಮ ವಕೀಲರ ಮೂಲಕ ರಿಪ್ಲೈ ನೋಟಿಸ್ ನೀಡಿದ್ದಾರೆ. ಈ ನೋಟಿಸ್ನಲ್ಲಿ ಯುವ ರಾಜ್ಕುಮಾರ್ ಅವರ ಜೊತೆ ನಟಿಸಿದ ಸಪ್ತಮಿ ಗೌಡ ಹೆಸರನ್ನು ಉಲ್ಲೇಖ ಮಾಡಲಾಗಿದೆ. ಪತಿ ಯುವ ರಾಜ್ಕುಮಾರ್ ಸಹ ನಟಿ ಸಪ್ತಮಿ ಗೌಡ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಶ್ರೀದೇವಿ ಬೈರಪ್ಪ ಆರೋಪಿಸಿದ್ದಾರೆ. ಇದನ್ನೂ ಓದಿ: ಯುವರಾಜ್ ಕುಮಾರ್ ಶ್ರೀದೇವಿ ಮೊದಲು ಭೇಟಿಯಾಗಿದ್ದೆಲ್ಲಿ.. ಪ್ರೀತಿ ಮೂಡಿದ್ದು ಹೇಗೆ? ಶ್ರೀದೇವಿ ಬೈರಪ್ಪ ಪತಿ ಯುವ ರಾಜ್ಕುಮಾರ್ ಮೇಲೆ ಅನೇಕ ವಿಚಾರಗಳ ಕುರಿತು ಆರೋಪಿಸಿ ನೋಟಿಸ್ ನೀಡಿದ್ದಾರೆ. ಮಾನಸಿಕ ಹಿಂಸೆ, ಆರ್ಥಿಕ ನಿರ್ಬಂಧ, ಸಹ ನಟಿ ಸಪ್ತಮಿ ಗೌಡ ಜೊತೆ ಸಂಬಂಧ ಹೀಗೆ ಅನೇಕ ವಿಚಾರಗಳು ಈ ನೋಟಿಸ್ನಲ್ಲಿವೆ. ಈ ನೋಟಿಸ್ ಪ್ರತಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನಟಿ ಸಪ್ತಮಿಗೌಡ ಹೆಸರು ಉಲ್ಲೇಖಿಸಸಿರುವ ವಿಚಾರ ಜೋರಾಗಿ ಸುದ್ದಿಯಾಗುತ್ತಿದೆ. ಈ ಬಗ್ಗೆ ನಟ ಯುವ ರಾಜ್ಕುಮಾರ್ ಪರ ವಕೀಲರು ಪ್ರತಿಕ್ರಿಯೆ ನೀಡಿದ್ದಾರೆ. ಶ್ರೀದೇವಿ ಬೈರಪ್ಪ ಮಾಡಿರುವ ಆರೋಪಗಳಿಗೆ ಯುವ ಪರ ವಕೀಲರಾಗಿರುವ ಸಿರಿಲ್ ಪ್ರಸಾದ್ ಮಾಧ್ಯಮಗಳ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಯುವ ಪತ್ನಿ ಶ್ರೀದೇವಿಗೆ ಅನೈತಿಕ ಸಂಬಂಧ? ಆತನಿಂದಲೇ ಮಗು ಪಡೆಯುವ ಇಚ್ಛೆ!! ಈ ʻರಾಧಯ್ಯʼ ಯಾರು ಗೊತ್ತೇ? ಯುವ ರಾಜ್ಕುಮಾರ್ಗೂ ನಟಿ ಸಪ್ತಮಿಗೌಡಗೂ ಯಾವುದೇ ಸಂಬಂಧ ಇಲ್ಲ ಎಂದು ಸಿರಿಲ್ ಪ್ರಸಾದ್ ತಿಳಿಸಿದ್ದಾರೆ. 'ಯುವ' ಸಿನಿಮಾ ಶೂಟಿಂಗ್ ವೇಳೆ ಯುವ ರಾಜ್ಕುಮಾರ್ ಮತ್ತು ಸಪ್ತಮಿಗೌಡ ಜೊತೆಗಿದ್ದ ಫೋಟೊಗಳನ್ನು ಬಳಸಿಕೊಂಡು ಶ್ರೀದೇವಿ ಸುಳ್ಳು ಆರೋಪಗಳನ್ನು ಮಾಡಿದ್ದಾರೆಂದು ಯುವ ಪರ ವಕೀಲರಾದ ಸಿರಿಲ್ ಪ್ರಸಾದ್ ಮಾಹಿತಿ ನೀಡಿದ್ದಾರೆ. ಯುವ ರಾಜ್ಕುಮಾರ್ಗೆ ಲೈಂಗಿಕತೆಯಲ್ಲಿ ಸಮಸ್ಯೆಯಿದೆ ಎಂದು ಶ್ರೀದೇವಿ ಬೈರಪ್ಪ ಆರೋಪಿಸಿದ್ದಾರೆ. ಇದರ ಜೊತೆಗೆ ಬೇರೆ ನಟಿಯೊಂದಿಗೆ ಸಂಬಂಧವಿದೆ ಎಂದೂ ಆರೋಪಿಸಿದ್ದಾರೆ. ಒಂದು ವೇಳೆ ಲೈಂಗಿಕತೆಯಲ್ಲಿ ಸಮಸ್ಯೆ ಇದ್ದರೆ, ಬೇರೊಂದು ಸಂಬಂಧ ಹೊಂದಲು ಹೇಗೆ ಸಾಧ್ಯ? ಎಂದು ಯುವ ಪರ ವಕೀಲ ಸಿರಿಲ್ ಪ್ರಸಾದ್ ಪ್ರಶ್ನಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. None
Popular Tags:
Share This Post:
What’s New
Spotlight
Today’s Hot
Featured News
Latest From This Week
ರಾಮನಗರ ಹೆಸರು ತೆಗೆದವರು ಸರ್ವನಾಶ ಆಗುತ್ತಾರೆ; ಹೆಚ್.ಡಿ.ಕುಮಾರಸ್ವಾಮಿ ಕಿಡಿ
KANNADA
- by Sarkai Info
- July 26, 2024
Subscribe To Our Newsletter
No spam, notifications only about new products, updates.