KANNADA

Vastu Tips For Plant: ಮನೆಯಲ್ಲಿ ಈ ಸಸ್ಯವನ್ನು ನೆಟ್ಟರೆ ನೀವು ಕೋಟ್ಯಾಧಿಪತಿಯಾಗುತ್ತೀರಿ..!

Vastu Tips For Plants: ಮನೆಯಲ್ಲಿ ಮರಗಳು ಮತ್ತು ಸಸ್ಯಗಳಿದ್ದರೆ ತಾಜಾತನ ಮತ್ತು ಧನಾತ್ಮಕತೆ ಇರುತ್ತದೆ. ಇದಲ್ಲದೆ ಕೆಲವು ಸಸ್ಯಗಳು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತವೆ. ವಾಸ್ತು ಶಾಸ್ತ್ರದಲ್ಲಿ ಕೆಲವು ಸಸ್ಯಗಳು ಮನೆಗೆ ತುಂಬಾ ಮಂಗಳಕರ ಮತ್ತು ಸಮೃದ್ಧವೆಂದು ಪರಿಗಣಿಸಲಾಗಿದೆ. ಈ ಗಿಡಗಳನ್ನು ಮನೆಗೆ ತಂದರೆ ಹಣದ ಕೊರತೆ ಇರುವುದಿಲ್ಲ, ಬದಲಿಗೆ ಸಂಪತ್ತು ಹೆಚ್ಚುತ್ತಲೇ ಇರುತ್ತದೆ. ಇದಲ್ಲದೆ ಈ ಸಸ್ಯಗಳನ್ನು ನೆಡುವುದರಿಂದ ಮನೆಯಲ್ಲಿ ಸಮೃದ್ಧಿಯನ್ನು ತರುತ್ತದೆ ಮತ್ತು ಪ್ರಗತಿಯ ಹಾದಿಯನ್ನು ತೆರೆಯುತ್ತದೆ. ಜಾತಕದಲ್ಲಿ ಅನೇಕ ಗ್ರಹಗಳು ದೋಷಗಳನ್ನು ತೆಗೆದುಹಾಕುತ್ತವೆ. ಮನೆಯಲ್ಲಿ ನೆಟ್ಟರೆ ಅಪಾರ ಆರ್ಥಿಕ ಲಾಭ ಮತ್ತು ಪ್ರಗತಿಯ ಅವಕಾಶಗಳನ್ನು ನೀಡುವ ಅದ್ಭುತ ಸಸ್ಯಗಳ ಬಗ್ಗೆ ಇಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಅದೃಷ್ಟವೇ ಬದಲಾಗುತ್ತದೆ ಮನಿ ಪ್ಲಾಂಟ್ ಬಗ್ಗೆ ಎಲ್ಲರಿಗೂ ತಿಳಿದಿದೆ, ಆದರೆ ಇದನ್ನು ಹೊರತುಪಡಿಸಿ ವಾಸ್ತು ಶಾಸ್ತ್ರದಲ್ಲಿ ಹಣದ ಲಾಭ ನೀಡುವ ಮತ್ತಷ್ಟು ಸಸ್ಯಗಳ ಬಗ್ಗೆ ತಿಳಿಸಲಾಗಿದೆ. ಅಂತಹ ಒಂದು ಸಸ್ಯವೇ ಶಮಿ ಸಸ್ಯ. ಮನೆಯಲ್ಲಿ ಶಮಿ ಗಿಡ ಅಥವಾ ಶಮಿ ವೃಕ್ಷವಿದ್ದರೆ ಶನಿದೇವನ ಆಶೀರ್ವಾದವು ಕುಟುಂಬದ ಮೇಲೆ ಸದಾ ಇರುತ್ತದೆ. ಇದಲ್ಲದೆ ಶನಿ ಸಾಡೇ ಸಾತಿ ಅಥವಾ ಧೈಯಾದಲ್ಲಿ ಇರುವವರು ಖಂಡಿತವಾಗಿಯೂ ಈ ಗಿಡವನ್ನು ತಮ್ಮ ಮನೆಯಲ್ಲಿ ನೆಟ್ಟು ಪ್ರತಿದಿನ ಪೂಜಿಸಬೇಕು. ಇದು ಶನಿಯ ದುಷ್ಪರಿಣಾಮಗಳಿಂದ ಪರಿಹಾರವನ್ನು ನೀಡುತ್ತದೆ. ಇದರಿಂದ ಶನಿಯು ಸಂತೋಷವಾಗುತ್ತಾನೆ ಮತ್ತು ಶುಭ ಫಲಿತಾಂಶಗಳನ್ನು ನೀಡುತ್ತಾನೆಂದು ನಂಬಲಾಗಿದೆ. ಇದನ್ನೂ ಓದಿ: ಮನೆಯ ಮುಂದೆ ಇದೊಂದು ಗಿಡ ನೆಟ್ಟು ನೋಡಿ... ಒಂದೇ ಒಂದು ಹಾವು ಕೂಡ ಅತ್ತಕಡೆ ಸುಳಿಯಲ್ಲ! ಇದರ ವಾಸನೆಗೆ ಓಡಿ ಹೋಗುತ್ತೆ ತಾಯಿ ಲಕ್ಷ್ಮಿದೇವಿಯ ಆಶೀರ್ವಾದ ಸಿಗುತ್ತದೆ ಮನೆಯಲ್ಲಿ ಶಮಿಗಿಡವನ್ನು ನೆಟ್ಟು ಪೂಜಿಸಿದರೆ ತಾಯಿ ಲಕ್ಷ್ಮಿದೇವಿಯೂ ಪ್ರಸನ್ನಳಾಗುತ್ತಾಳೆ. ಮನೆಗೆ ಹಣ ಹರಿವು ಹೆಚ್ಚಾಗುತ್ತದೆ. ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚುತ್ತಲೇ ಇರುತ್ತದೆ. ಶಮಿ ಸಸಿ ನೆಡಲು ಶ್ರಾವನ ಮಾಸವನ್ನು ಉತ್ತಮವೆಂದು ಪರಿಗಣಿಸಲಾಗಿದೆ. ಅಲ್ಲದೆ ಶನಿವಾರ ಶಮಿ ಸಸಿಯನ್ನು ನೆಡಬೇಕು. ಹಾಗೆಯೇ ಪ್ರತಿದಿನ ಬೆಳಗ್ಗೆ ಶಮಿ ಗಿಡಕ್ಕೆ ನೀರು ಅರ್ಪಿಸಿ ಸಂಜೆ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಬೇಕು. ಶಮಿ ಗಿಡ ಇಡಲು ಸೂಕ್ತ ಸ್ಥಳ ಯಾವುದು? ಶಮಿ ಗಿಡ ವನ್ನು ಮನೆಯ ಮುಖ್ಯ ದ್ವಾರದ ಬಳಿ ನೆಟ್ಟರೆ ಅದು ಅತ್ಯಂತ ಶ್ರೇಯಸ್ಕರ. ನೀವು ಮನೆಯಿಂದ ಹೊರಗೆ ಬಂದಾಗ ನಿಮ್ಮ ಬಲಭಾಗದಲ್ಲಿ ಈ ಸಸ್ಯವು ಇರುತ್ತದೆ. ಇದಲ್ಲದೇ ಮನೆಯ ಛಾವಣಿಯ ಮೇಲೂ ಶಮಿ ಗಿಡ ನೆಡಬಹುದು. ಅಲ್ಲದೆ ಶಮಿ ಗಿಡವನ್ನು ಮನೆಯ ದಕ್ಷಿಣ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿಯೂ ನೆಡಬಹುದು. ಇದನ್ನೂ ಓದಿ: ಹಣ ಖರ್ಚು ಮಾಡದೆಯೇ ನಿಮ್ಮ ಬಿಳಿ ಕೂದಲನ್ನು ಕಡು ಕಪ್ಪಾಗಿಸಬಹುದು! ಇದನ್ನೊಮ್ಮೆ ಟ್ರೈ ಮಾಡಿ! (ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. KANNADA NEWS ಇದನ್ನು ದೃಢಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.