ಕನ್ನಡ ಕಾಮಿಡಿ ಕಿಲಾಡಿ ವೇದಿಕೆ ಮೇಲೆ ಅಮಿತಾಭ್ ಬಚ್ಚನ್; ಹುಟ್ಟಿದರೆ ಕನ್ನಡ ಹಾಡಿಗೆ ಡ್ಯಾನ್ಸ್ ಮಾಡಿದ ಕನ್ನಡ ಬಿಗ್ ಬಿ! ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ (Comedy Khiladigalu Premiere League) ಕೊನೆ ಹಂತಕ್ಕೆ ಬಂದಿದೆ. ಗ್ರ್ಯಾಂಡ್ ಫಿನಾಲೆಗೆ ವಿಶೇಷ ಸ್ಕಿಟ್ಗಳನ್ನ ಕೂಡ ಪ್ಲಾನ್ ಮಾಡಿದ್ದಾರೆ. ಅದರಲ್ಲಿ ಅಮಿತಾಭ್ ಬಚ್ಚನ್ ಬಂದಿರೋದು ವಿಶೇಷವೇ ಆಗಿವೆ. ಬಾಲಿವುಡ್ ಬಿಗ್ ಬಿ (Bollywood Bigg B) ಕನ್ನಡ ಶೋಗೆ ಬಂದ್ರೇ? ಈ ಒಂದು ಪ್ರಶ್ನೇ ಕೇಳುತ್ತಲೇ ಹುಬ್ಬೇರಿಸುವವರಿಗೆ ಒಂದು ಕ್ಲಾರಿಟಿ ಕೊಟ್ಟು ಬಿಡ್ತಿವಿ ನೋಡಿ. ಹೌದು, ಕಾಮಿಡಿ ಕಿಲಾಡಿ ವೇದಿಕೆಗೆ ಬಿಗ್ ಬಿ ಬಂದಿರೋದೇನೋ ನಿಜ, ಆದರೆ, ಅದು ಜೂನಿಯರ್ ಅಮಿತಾಭ್ ಬಚ್ಚನ್ (Junior Amitabh Bachchan) ಅನ್ನೋದು ಅಷ್ಟೇ ವಿಶೇಷವೇ ಆಗಿದೆ. ಕನ್ನಡದ ಜೂನಿಯರ್ ಅಮಿತಾಭ್ ಬಚ್ಚನ್ ತೇಟ್ ಅಮಿತಾಭ್ ಅವರನ್ನೆ ಹೋಲುತ್ತಾರೆ. ಇವರ ಬಗ್ಗೆ ಆ್ಯಂಕರ್ ಅನುಶ್ರೀ (Anchor Anushree) ಪರಿಚಯ ಕೂಡ ಕೊಟ್ಟಿದ್ದಾರೆ. ಈ ಅಮಿತಾಭ್ ಬಚ್ಚನ್ ಇನ್ನಷ್ಟು ವಿವರ ಇಲ್ಲಿದೆ ಓದಿ. ಕಿಲಾಡಿಗಳ ವೇದಿಕೆಯಲ್ಲಿ ಬಿಗ್ ಬಿ ಕಾಮಿಡಿ ಕಿಲಾಡಿಗಳು ಶೋದಲ್ಲಿ ಹೊಸತನ ಜಾಸ್ತಿನೇ ಬಿಡಿ. ಕಳೆದ ಎರಡ್ಮೂರು ವಾರದ ಹಿಂದೆ ಜೂನಿಯರ್ ರಾಜ್ಕುಮಾರ್ ಬಂದಿದ್ದರು. ಜೂನಿಯರ್ ಪುನೀತ್ ರಾಜ್ಕುಮಾರ್ ಕೂಡ ಬಂದಿದ್ದರು. ಇವರು ಬಂದು ಕನ್ನಡಿಗರಿಗೆ ವಿಶೇಷವಾಗಿಯೇ ರಂಜಿಸಿದ್ದರು. ಇದೀಗ ಇದೇ ವೇದಿಕೆಗೆ ಜೂನಿಯರ್ ಅಮಿತಾಭ್ ಬಚ್ಚನ್ ಬಂದಿದ್ದಾರೆ. ಬಂದು ಅಮಿತಾಭ್ ಬಚ್ಚನ್ ತರವೇ ಡೈಲಾಗ್ ಹೊಡೆದಿದ್ದಾರೆ. ಅಮಿತಾಭ್ ಬಚ್ಚನ್ ರೀತಿನೆ ಡ್ಯಾನ್ಸ್ ಕೂಡ ಮಾಡಿದ್ದಾರೆ. ಈ ಮೂಲಕ ಕನ್ನಡಿಗರನ್ನ ಈ ವಾರ ಸಖತ್ ಆಗಿಯೇ ಎಂಟರಟೈನ್ ಕೂಡ ಮಾಡಲಿದ್ದಾರೆ. ಇದನ್ನ ಓದಿ: Ranjani Raghavan: ‘ಹುಚ್ಚು ಕೋಡಿ ಮನಸು’ ಅಂತ ಹಾಡ್ತಿದ್ದಾರೆ ರಂಜನಿ ರಾಘವನ್; ನಿಮ್ಮಷ್ಟೇ ಸುಂದರ ನಿಮ್ಮ ಧ್ವನಿ ಎಂದ ಫ್ಯಾನ್ಸ್! ಕನ್ನಡದ ಜೂನಿಯರ್ ಅಮಿತಾಭ್ ಬಚ್ಚನ್ ಜೂನಿಯರ್ ಅಮಿತಾಭ್ ಬಚ್ಚನ್ ಕನ್ನಡದವ್ರೇ ಆಗಿದ್ದಾರೆ. ಇವರನ್ನ ನೋಡಿದ ರಿಯಲ್ ಅಮಿತಾಭ್ ಭೇಟಿಯಾಗಿದ್ದಾರೆ. ಅಷ್ಟೇ ಖುಷಿಯಿಂದಲೂ ಮಾತನಾಡಿಸಿದ್ದಾರೆ. ಅಮಿತಾಭ್ ಬಚ್ಚನ್ ರೀತಿನೇ ಇರೋ ಈ ಜೂನಿಯರ್ ಅಮಿತಾಭ್ ಬಚ್ಚನ್ ಸಖತ್ ಎಂಟರಟೈನ್ ಮಾಡಿದ್ದಾರೆ. ಜೂನಿಯರ್ ಅಮಿತಾಭ್ ಬಚ್ಚನ್ ಬಗ್ಗೆ ಆ್ಯಂಕರ್ ಅನುಶ್ರೀ ಪರಿಚಯ ಮಾಡಿದ್ದಾರೆ. ಈ ಮೂಲಕ ಕನ್ನಡದ ಜೂನಿಯರ್ ಅಮಿತಾಭ್ ಬಚ್ಚನ್ ಇಲ್ಲಿ ಹೆಚ್ಚು ಗಮನ ಸೆಳೆದಿದ್ದಾರೆ. ನಾನೂ ರಾಜ್ಕುಮಾರ್ ಫ್ಯಾನ್ ಜೂನಿಯರ್ ಅಮಿತಾಭ್ ಬಚ್ಚನ್ ಒಂದು ಮಾತು ಹೇಳಿದ್ದಾರೆ. ನಾನು ರಾಜಕುಮಾರ್ ಫ್ಯಾನ್ ಅಂತ ಮನದುಂಬಿ ಹೇಳಿದ್ದಾರೆ. ಆಕಸ್ಮಿಕ ಚಿತ್ರದ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಹಾಡಿಗೂ ಡ್ಯಾನ್ಸ್ ಮಾಡಿದ್ದಾರೆ. ಹೀಗೆ ಕನ್ನಡದ ಅಮಿತಾಭ್ ಬಚ್ಚನ್ ತಮ್ಮ ಕನ್ನಡ ಪ್ರೀತಿಯನ್ನೂ ಕಾಮಿಡಿ ಕಿಲಾಡಿಗಳು ವೇದಿಕೆ ಮೇಲೆ ತೋರಿದ್ದಾರೆ. ಇದರ ಝಲಕ್ ಪ್ರೋಮೋದಲ್ಲೂ ರಿವೀಲ್ ಆಗಿದೆ. ಕಾಮಿಡಿ ಕಿಲಾಡಿಗಳು ಫಿನಾಲೆ ಸಂಭ್ರಮ ಕಾಮಿಡಿ ಕಿಲಾಡಿಗಳು ಫಿನಾಲೆ ಹಂತಕ್ಕೆ ಬಂದಿದೆ. ಈ ಒಂದು ದಿನದಂದು ವಿಶೇಷ ಸ್ಕಿಟ್ ಕೂಡ ಪ್ಲಾನ್ ಆಗಿವೆ. ವಾರಾಂತ್ಯದ ಶನಿವಾರ ಹಾಗೂ ಭಾನುವಾರ ಎರಡು ದಿನ ಭರಪೂರ್ ಮನರಂಜನೆ ಫ್ಲಾನ್ ಅಗಿದೆ. ಹಾಗೆ ಕಾಮಿಡಿ ಕಿಲಾಡಿಗಳು ಗೆಲ್ಲೋರು ಯಾರು? ಕಪ್ ಮನೆಗೆ ತೆಗೆದುಕೊಂಡು ಹೋಗೋರು ಯಾರು? ಈ ಒಂದು ಕುತೂಹಲ ಕೂಡ ಇದೆ. ಹಾಗೆ ಈ ಒಂದು ಶೋದ ಅಧಿಕೃತ ಪ್ರೋಮೋ ಈಗಾಗಲೇ ಹೆಚ್ಚು ಗಮನ ಸೆಳೆಯುತ್ತಿದೆ ಅಂತಲೂ ಹೇಳಬಹುದು. None
Popular Tags:
Share This Post:
What’s New
Spotlight
Today’s Hot
-
- October 16, 2024
-
- October 16, 2024
-
- October 16, 2024
Yatnal: ಬಸನಗೌಡ ಪಾಟೀಲ್ ಯತ್ನಾಳ್ಗೆ ಸಂಕಷ್ಟ! ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆ
- By Sarkai Info
- October 16, 2024
Featured News
Latest From This Week
Subscribe To Our Newsletter
No spam, notifications only about new products, updates.