NEWS

Ugramm Manju: ಉಗ್ರಂ ಮಂಜು-ಧರ್ಮ ಕೀರ್ತಿರಾಜ್ ಟೆನೆಂಟ್ ಸಿನಿಮಾ ರೆಡಿ; ಈ ಚಿತ್ರದಲ್ಲಿ ಇವರದ್ದೇ ಅಬ್ಬರ!

ಉಗ್ರಂ ಮಂಜು-ಧರ್ಮ ಕೀರ್ತಿರಾಜ್ ಟೆನೆಂಟ್ ಸಿನಿಮಾ ರೆಡಿ; ಈ ಚಿತ್ರದಲ್ಲಿ ಇವರದ್ದೇ ಅಬ್ಬರ! ಬಿಗ್ ಬಾಸ್ (Bigg Boss) ಮನೆಯಲ್ಲಿರೋ ಉಗ್ರಂ ಮಂಜು (Ugramm Manju) ಮತ್ತು ಧರ್ಮ ಕೀರ್ತಿರಾಜ್ (Dharma Keerthi) ಒಂದು ಸಿನಿಮಾ ಮಾಡಿದ್ದಾರೆ. ಮನೆ ಒಳಗೆ ಹೋಗೋ ಮೊದಲೇ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇಬ್ಬರದ್ದೂ ಇಲ್ಲಿ ವಿಶೇಷ ಪಾತ್ರವೇ ಇದೆ. ಇದರ ಖದರ್ ಹೇಗಿದೆ ಅನ್ನೋದನ್ನ ಟೀಸರ್ ಹೇಳುತ್ತಿದೆ. ಲಾಕ್ ಡೌನ್ ಟೈಮ್‌ನಲ್ಲಿ ಏನೆಲ್ಲ ಆಯಿತು ಅನ್ನೋದು ಈ ಚಿತ್ರದಲ್ಲಿದೆ. ಆದರೆ, ಇದು ಕ್ರೈಂ ಥ್ರಿಲ್ಲರ್ (Crime Thriller) ಕಥಾಹಂದರ ಹೊಂದಿರೋ ಚಿತ್ರವೇ ಆಗಿದೆ. ಇದರ ಟೀಸರ್ ನೋಡಿದ್ರೆ, ಇಡೀ ಚಿತ್ರದ ಒಟ್ಟು ಚಿತ್ರಣ ದೊರೆಯುತ್ತದೆ. ವಿಶೇಷವಾಗಿ ಈ ಚಿತ್ರದ ಟೈಟಲ್ ಹೆಚ್ಚು ಗಮನ ಸೆಳೆಯುತ್ತಿದೆ. ಇದನ್ನ ಕನ್ನಡದ ಹೆಸರಾಂತ ಡೈರೆಕ್ಟರ್ ರಿಲೀಸ್ ಮಾಡಿದ್ದಾರೆ. ಈ ಮೂಲಕ ಚಿತ್ರಕ್ಕೆ ಸಪೋರ್ಟ್ ಕೂಡ ಮಾಡಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಟೆನೆಂಟ್ ಚಿತ್ರದಲ್ಲಿ ಧರ್ಮ-ಉಗ್ರಂ ಮಂಜು ಧರ್ಮ ಕೀರ್ತಿರಾಜ್ ಲವರ್ ಬಾಯ್ ಕ್ಯಾರೆಕ್ಟರ್ ಮಾಡಿದ್ದಾರೆ. ನವಗ್ರಹ ಚಿತ್ರದಲ್ಲಿ ಚಾಕ್ಲೆಟ್ ಹೀರೋ ಆಗಿಯೇ ಕಾಣಿಸಿಕೊಂಡಿದ್ದಾರೆ. ಕಣ್ ಕಣ್ಣ ಸಲಿಗೆ ಹಾಡಿನ ಮೂಲಕ ಹೆಚ್ಚು ಗಮನ ಸೆಳೆದರು. ಈ ಸಿನಿಮಾ ಆದ್ಮೇಲೆ ಸಾಫ್ಟ್ ಕ್ಯಾರೆಕ್ಟರ್‌ಗಳನ್ನೆ ಮಾಡ್ತಾ ಬಂದ್ರು. ಆದರೆ, ಈ ಚಿತ್ರದಲ್ಲಿ ಧರ್ಮ ಕೀರ್ತಿರಾಜ್ ಉಗ್ರ ಅವತಾರ ನೋಡಬಹುದು. ಇಲ್ಲಿವರೆಗೂ ನೋಡದ ಪಾತ್ರದಲ್ಲಿ ಧರ್ಮ ಇಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆ ಉಗ್ರಂ ಮಂಜು ಅವತಾರ ಇಲ್ಲಿ ವಿಭಿನ್ನವಾಗಿಯೇ ಇದೆ. ವಿಲನ್ ರೋಲ್ ಅಂತಲೂ ಅನಿಸುತ್ತೆ. ಆದರೆ, ಇಲ್ಲಿ ಇನ್ನು ಎರಡು ಪಾತ್ರಗಳಿವೆ. ಅವುಗಳ ಲವ್ ಸ್ಟೋರಿನೆ ಬೋಲ್ಡ್ ಬೋಲ್ಡ್ ನೋಡಿ. ಇದನ್ನೂಓದಿ: Chaithra Achar: ಬಿಕಿನಿ ಧರಿಸಿ ಮಳೆಯಲ್ಲೇ ಸ್ವಿಮ್ಮಿಂಗ್ ಪೂಲ್​ಗಿಳಿದ ಚೈತ್ರಾ ಆಚಾರ್​! ಕ್ರೇಜಿ ಗರ್ಲ್​ ಎಂದ ಫ್ಯಾನ್ಸ್​! ಸೋನು ಗೌಡ-ರಾಕೇಶ್ ಲವ್ಲಿ ಜೋಡಿ ರಾಕೇಶ್ ಮಯ್ಯ ಮತ್ತು ಸೋನು ಗೌಡ ಇಲ್ಲಿ ಕಪಲ್ ರೋಲ್ ಮಾಡಿದ್ದಾರೆ. ಹಸಿಬಿಸಿ ದೃಶ್ಯದಲ್ಲೂ ಕಾಣಿಸಿಕೊಂಡಿದ್ದಾರೆ. ಆದರೆ, ಈ ದೃಶ್ಯಗಳಿಂದಲೇ ಏನೋ ಆಗೋ ಹಾಗಿದೆ. ಅದರ ಝಲಕ್ ಟೀಸರ್‌ನಲ್ಲಿ ಸಿಗುತ್ತದೆ. ಆದರೆ, ಈ ಚಿತ್ರ ಒಂದು ಕ್ರೈಂ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಅದರ ಒಂದಷ್ಟು ಝಲಕ್ ಕೂಡ ಇದೇ ಟೀಸರ್‌ನಲ್ಲಿಯೇ ಸಿಗುತ್ತದೆ. ಸಿನಿಮಾದಲ್ಲಿ ಏನೋ ಒಂದು ಕೊಲೆಯ ಸುತ್ತದ ಕಥೆ ಇದೆ ಅನ್ನೋದು ತಿಳಿಯುತ್ತದೆ. ಟೆನೆಂಟ್ ಟೀಸರ್ ಪ್ರಾಮಿಸಿಂಗ್ ಆಗಿದೆ ಟೆನೆಂಟ್ ಚಿತ್ರದ ಟೀಸರ್ ಪ್ರಾಮಿಸಿಂಗ್ ಆಗಿದೆ. ಇದರ ಪ್ರತಿ ಫ್ರೇಮ್‌ ಅಲ್ಲೂ ಹೊಸ ಫೀಲ್ ಇದೆ. ಒಳ್ಳೆ ಕ್ಯಾಮರಾವರ್ಕ್ ಕೂಡ ಇದೆ. ಶ್ರೀಧರ್ ಶಾಸ್ತ್ರಿ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಇದು ಇವರ ಮೊದಲ ಚಿತ್ರವೇ ಆಗಿದೆ. ಮೊದಲ ಪ್ರಯತ್ನದಲ್ಲಿಯೇ ಒಳ್ಳೆ ಚಿತ್ರ ಕೊಡುತ್ತಿದ್ದಾರೆ ಅನಿಸುತ್ತಿದೆ. ಚಿತ್ರದ ಟೀಸರ್ ಅನ್ನ ಅನೇಕರು ಮೆಚ್ಚಿಕೊಂಡಿದ್ದಾರೆ. ಕ್ಯಾಮರಾಮನ್ ಸತ್ಯ ಹೆಗಡೆ ಇದನ್ನ ರಿಲೀಸ್ ಮಾಡಿದ್ದಾರೆ. ಹಾಗೇನೆ ನಿರ್ದೇಶಕರಾದ ಶಶಾಂಕ್, ಪವನ್ ಒಡೆಯರ್, ಖ್ಯಾತ ಡಿಸೈನರ್ ಹಾಗೂ ವಿತರಕಿ ಸಚಿನ್ನಾ ಹೆಗ್ಗಾರ್, ಚಂದನ್ ಶೆಟ್ಟಿ, ನಟ, ನಿರ್ಗೇಶಕ ವಿಕ್ಕಿ, ನಟ ನವೀಶ್ ಶಂಕರ್, ಸೇರಿದಂತೆ ಅನೇಕರು ರಿಲೀಸ್ ಮಾಡಿ ಸಿನಿಮಾತಂಡಕ್ಕೆ ಸಾಥ್ ನೀಡಿದ್ದಾರೆ ಇದೇ ನವೆಂಬರ್ 22 ಕ್ಕೆ ರಿಲೀಸ್ ಟೆನೆಂಟ್ ಚಿತ್ರ ರೆಡಿ ಆಗಿದೆ. ಇದೇ ನವೆಂಬರ್-22ಕ್ಕೆ ರಿಲೀಸ್ ಆಗುತ್ತಿದೆ. ಮನೋಹರ್ ಕ್ಯಾಮರಾವರ್ಕ್ ಮಾಡಿದ್ದಾರೆ. ಗಿರೀಶ್ ಹೊತೂರ್ ಸಂಗೀತ ಕೊಟ್ಟಿದ್ದಾರೆ. ಇನ್ನುಳಿದಂತೆ ಚಿತ್ರದ ಟೀಸರ್ ಪ್ರಾಮಿಸಿಂಗ್ ಆಗಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.