NEWS

Bigg Boss: ಜಗಳದ ನಡುವೆ ಜಗದೀಶ್​ಗೆ ಕಾಲಿನಲ್ಲಿ ಒದ್ರಾ ರಂಜಿತ್? ವಿಡಿಯೋ ವೈರಲ್​, ಇದೆಂಥಾ ವರ್ತನೆ ಎಂದ್ರು ಜನ!

ಬಿಗ್​ ಬಾಸ್​ ಸೀಸನ್ 11 (Bigg Boss Season 11) ಶುರುವಾಗಿ ಮೂರು ವಾರ ಆಗ್ತಿದ್ದಂತೆ ಬಿಗ್ ಬಾಸ್ (Bigg Boss) ಮನೆಯಲ್ಲಿ ಬಿರುಗಾಳಿಯೇ ಎದ್ದಿದೆ. ಮಾತಿಗೆ ಮಾತು ಬೆಳೆದು ದೊಡ್ಮನೆ ರಣರಂಗವಾಗಿ ಮಾರ್ಪಟ್ಟಿದೆ. ಜಗದೀಶ್ ಹಾಗೂ ರಂಜಿತ್ (Jagdish And Ranjith)​ ಜಗಳದ ನಡುವೆ ಕೈ ಕೈ ಮಿಲಾಯಿಸಿದ್ದಾರೆ ಎನ್ನಲಾಗ್ತಿದೆ. ಇದಕ್ಕೆ ಪುಷ್ಠಿ ಎಂಬಂತೆ ಸೋಶಿಯಲ್ ಮೀಡಿಯಾದಲ್ಲಿ (Social Medai) ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ರಂಜಿತ್, ಜಗದೀಶ್​ಗೆ ಕಾಲಿನಲ್ಲಿ ಒದ್ದಿದ್ದಾರೆ. ಜಗದೀಶ್​ಗೆ ಕಾಲಿನಲ್ಲಿ ಒದ್ರಾ ರಂಜಿತ್?​ ಮಾನಸ ಜೊತೆ ಜಗದೀಶ್ ಜಗಳವಾಡ್ತಿದ್ದ ವೇಳೆ ಮಂಜು, ತ್ರಿವಿಕ್ರಮ್ ಹಾಗೂ ರಂಜಿತ್​ ಮಧ್ಯೆ ಪ್ರವೇಶ ಮಾಡಿದ್ರು. ಮೂವರು ಜಗದೀಶ್​ ಮೇಲೆ ಎರಗಿದ್ರು. ಕ್ಯಾಪ್ಟನ್ ಶಿಶಿರ್ ಎಲ್ಲರನ್ನು ಸಮಾಧಾನ ಮಾಡಲು ಯತ್ನಿಸಿದ್ರು. ಈ ವೇಳೆ ರಂಜಿತ್, ಜಗದೀಶ್​ ಅವರಿಗೆ ಹಿಂಬದಿಯಿಂದ ಕಾಲಿನಲ್ಲಿ ಒದ್ದಿದ್ದಾರೆ. ತಕ್ಷಣ ಮೋಕ್ಷಿತಾ ಅವರು ರಂಜಿತ್​ನನ್ನು ಎಳೆದುಕೊಂಡು ಹೋಗಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗ್ತಿದೆ. It’s shows clearly. Ranjith had man handled firstly and according to the BB rules he should be sent out of biggboss house immediately!! @ColorsKannada @KicchaSudeep #BBK11 pic.twitter.com/9jhZ87YXDW ರಂಜಿತ್​ಗೆ ಛೀಮಾರಿ ಹಾಕಿದ ಜನ ವಿಡಿಯೋ ನೋಡಿದ ನೆಟ್ಟಿಗರು ರಂಜಿತ್ ವರ್ತನೆ ಬಗ್ಗೆ ಕಿಡಿಕಾರಿದ್ರು. ಜಗದೀಶ್ ಮೇಲೆ ರಂಜಿತ್ ಕೈ ಮಾಡಿದ್ದು ಸರಿಯಲ್ಲ ಎಂದು ಕಮೆಂಟ್ ಮಾಡ್ತಿದ್ದಾರೆ. ಒಬ್ಬಂಟಿಯಾಗಿರುವ ಜಗದೀಶ್ ಅವರನ್ನು ಎಲ್ಲರೂ ಸೇರಿ ಟಾರ್ಗೆಟ್ ಮಾಡ್ತಿರೋದು ಎಷ್ಟು ಸರಿ ಎಂದು ಪ್ರಶ್ನೆ ಮಾಡ್ತಿದ್ದಾರೆ. ಲಾಯರ್​ ಜಗದೀಶ್ ಅವರನ್ನು ರಿಯಲ್ ಹೀರೋ ಅಂತ ಕರೀತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಜಗದೀಶ್ ಆರ್ಭಟ ಜೋರಾಗಿದೆ. ನ್ಯಾಯ ಪರ ನಾನು ಎನ್ನುವ ಜಗದೀಶ್, ಸ್ಪರ್ಧಿಗಳ ಜೊತೆ ಕಾಲು ಕೆರೆದುಕೊಂಡು ಜಗಳ ಮಾಡ್ತಿದ್ದಾರೆ. ಇಡೀ ಬಿಗ್ ಬಾಸ್ ಮನೆಯ ಸ್ಪರ್ಧಿಗಳೇ ಒಂದೆಡೆ ಇದ್ರೆ, ಜಗದೀಶ್ ಒಬ್ಬಂಟಿಯಾಗಿ ಹೋರಾಡ್ತಿದ್ದಾರೆ. ಜಗ್ಗು ಮೇಲೇ ಎರಗಿದ್ರು ಮಂಜು, ರಂಜಿತ್​! ಹೆಣ್ಣು ಮಕ್ಕಳ ಬಗ್ಗೆ ಏನ್ ಈ ತರ ಮಾತಾಡ್ತಿಯಾ ಎಂದು ಮಂಜು, ತ್ರಿವಿಕ್ರಮ್ ಹಾಗೂ ರಂಜಿತ್ ಜಗಳಕ್ಕೆ ಇಳಿದ್ರು. ಮನೆ ಮಂದಿಯೆಲ್ಲಾ ಒಂದಾಗಿ ಲಾಯರ್ ಜಗ್ಗು ಮೇಲೇ ಮುಗಿಬಿದ್ರು. ಎಲ್ರನ್ನು ಮಾತಲ್ಲೇ ಎದುರಿಸಿದ ಜಗದೀಶ್, ನಾನು ಇಲ್ಲಿ ಇರಲ್ಲ ಎಂದು ಕೂಗಾಗಿದ್ರು. ಬಳಿಕ ಅವರನ್ನು ಬಿಗ್ ಬಾಸ್ ಕನ್ಸೇಷನ್ ರೂಮ್​ಗೆ ಕರೆದು ತಣ್ಣಗಾಗಿಸಿದ್ರು. ಇದನ್ನೂ ಓದಿ: Bigg Boss Kannada: ಬಿಗ್​ ಬಾಸ್​ ಮನೆಯ ‘ಶಕುನಿ’ ಇವರೇನಾ? ಜಗದೀಶ್​ ಕೆಣಕಿ ರಾದ್ಧಾಂತಕ್ಕೆ ಕಾರಣವಾದ್ರಾ ಈ ವಿಲನ್? ಬಿಗ್ ಬಾಸ್ ಮನೆಯವರ ಮಿತಿ ಮೀರಿದ ವರ್ತನೆಗೆ ಬಿಗ್ ಬಾಸ್ ಕೂಡ ಕೋಪಗೊಂಡ್ರು. ಎಲ್ಲರ ಮೇಲೆ ಗದರಿದ್ರು. ಮನೆಯ ಸದಸ್ಯರು ತಾಳ್ಮೆ ಕಳೆದುಕೊಳ್ಳಬಾರದು ಎಂದು ಬಿಗ್ ಬಾಸ್ ಸಲಹೆ ನೀಡಿದ್ರು. ಬಳಿಕ ದೊಡ್ಮನೆ ಕೂಲ್ ಆಯ್ತು. ಏಕಾಂಗಿಯಾಗಿ ತನ್ನ ಪಾಡಿಗೆ ತಾನು ಕೂತಿದ್ದ ಜಗದೀಶ್ ಅವರನ್ನು ಮಂಜು ಕೆಣಕಿದ್ರು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.