ಮಳೆಯಲಿ ಸ್ವಿಮಿಂಗ್ ಫೂಲ್ ಅಲ್ಲಿ; ಚೈತ್ರಾ ಈಜಾಟಾ ಬಲು ಜೋರು! ಕನ್ನಡದ ನಾಯಕಿ ನಟಿ ಚೈತ್ರಾ ಆಚಾರ್ (Chaithra Achar) ಹೊಸದನ್ನೆ ನೋಡ್ತಾ ಇರ್ತಾರೆ. ವಿನೂತನ ಪರಿಕಲ್ಪನೆಯನ್ನೆ ನೋಡ್ತಾ ಇರ್ತಾರೆ. ಫೋಟೋ ಶೂಟ್ (Photo Shoot) ವಿಚಾರದಲ್ಲಿ ಅದು ಗೊತ್ತೆ ಇದೆ. ಇದೀಗ ಅಂತಹದ್ದೇ ಇನ್ನೂ ಒಂದು ಸಾಹಸ ಮಾಡಿದ್ದಾರೆ. ಆದರೆ, ಇದು ಮಳೆಯಲ್ಲಿ ಸ್ವಿಮಿಂಗ್ ಮಾಡಿರೋ ಕಥೆ ಆಗಿದೆ. ಅಂದ್ರೆ, ಸುರಿಯೋ ಮಳೆಯಲ್ಲಿ ಚೈತ್ರಾ (Chaithra) ಸ್ವಿಮಿಂಗ್ ಫೂಲ್ ಅಲ್ಲಿ ಈಜಾಡಿದ್ದಾರೆ. ಈ ಒಂದು ಸ್ಪೆಷಲ್ ಕ್ಷಣದ ವಿಡಿಯೋ ಕೂಡ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ರಾಕಿಂಗ್ ಸ್ಟಾರ್ ಯಶ್ (Rocking Star Yash) ಹೊಡೆದ ಕೆಜಿಎಫ್ ಡೈಲಾಗ್ ಕೂಡ ಹೊಡೆದಿದ್ದಾರೆ. ಅದು ಏನು? ಬಿಕಿನಿ ತೊಟ್ಟ ಚೈತ್ರಾ ಮಳೆಯಲ್ಲಿಯೇ ಈಜಿರೋದು ಯಾಕೆ? ಈ ಬಗೆಗಿನ ಒಂದಷ್ಟು ಮಾಹಿತಿ ಇಲ್ಲಿದೆ ಓದಿ. ನಾನು ಬಿಟ್ರು ಮಳೆ ನನ್ನ ಬಿಡ್ತಿಲ್ಲ… ಸ್ವಿಮಿಂಗ್ ಫೂಲ್ನಲ್ಲಿ ಈಜೋ ಖುಷಿ ಬೇರೆ ಇರುತ್ತದೆ. ನದಿ ಮತ್ತು ಹಳ್ಳದಲ್ಲಿ ಸ್ವಿಮಿಂಗ್ ಮಾಡೋ ಖುಷಿ ಅಂತೂ ಬೇರೆನೆ ಬಿಡಿ. ಆದರೆ, ಚೈತ್ರಾ ಆಚಾರ್ ಇನ್ನೂ ಒಂದು ಕೆಲಸ ಮಾಡಿದ್ದಾರೆ. ಸ್ವಿಮಿಂಗ್ ಫೂಲ್ ಒಂದರಲ್ಲಿ ಮಳೆಯಲ್ಲಿಯೇ ಈಜಿಸಿದ್ದಾರೆ. ಈ ಒಂದು ವಿಶೇಷ ಅನುಭವದ ಕುರಿತು ಒನ್ ಲೈನ್ ಅಲ್ಲಿಯೇ ಹೇಳಿಕೊಂಡಿದ್ದಾರೆ. ನಾನು ಬಿಟ್ರು…ನನ್ನ ಮಳೆ ಬಿಡುತ್ತಿಲ್ಲ ಅನ್ನೋ ಅರ್ಥದಲ್ಲಿಯೇ ಬರೆದುಕೊಂಡಿದ್ದಾರೆ. ಇಂಗ್ಲೀಷ್ನಲ್ಲಿ ಅದು ಇಂತಿದೆ. “Getting drenched in the rains I Avaaaid, but Rain doesn’t Avaaaid me” ಹೌದು, ಈ ರೀತಿ ಡೈಲಾಗ್ ಅನ್ನ ರಾಕಿಂಗ್ ಸ್ಟಾರ್ ಯಶ್ ತಮ್ಮ ಕೆಜಿಎಫ್ ಚಿತ್ರದಲ್ಲಿಯೇ ಹೊಡೆದಿದ್ದಾರೆ. ಇದನ್ನೂ ಓದಿ: Roopesh Rajanna: ಸುದೀಪ್ ಬಿಗ್ ಬಾಸ್ಗೆ ಗುಡ್ ಬೈ ಹೇಳಿದ್ಯಾಕೆ? ಸೀಕ್ರೆಟ್ ಬಿಚ್ಚಿಟ್ಟ ರೂಪೇಶ್ ರಾಜಣ್ಣ ವೈಲೆನ್ಸ್ ಲೈಕ್ಸ್ ಮೀ ಕೆಜಿಎಫ್ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಈ ಡೈಲಾಗ್ ಹೇಳಿದ್ದರು. ನಾನು ವೈಲೆನ್ಸ್ ಇಷ್ಟಪಡೋದಿಲ್ಲ. ಆದರೆ, ವೈಲೆನ್ಸ್ ನನ್ನ ಇಷ್ಟಪಡುತ್ತದೆ ಅಂಂತಲೇ ಹೇಳಿದ್ದರು. ಅದನ್ನೆ ಇಲ್ಲಿ ಚೈತ್ರಾ ಆಚಾರ್ ಮಳೆಗೆ ಹೋಲಿಸಿ ಬರೆದಿದ್ದಾರೆ. ಹಾಗಾಗಿಯೇ ಇದು ಇನ್ನಷ್ಟು ವಿಶೇಷವಾಗಿಯೇ ಕಾಣಿಸುತ್ತಿದೆ. ಅಂದ್ಹಾಗೆ ಚೈತ್ರಾ ಆಚಾರ್ ಈ ಒಂದು ವಿಶೇಷ ಅನುಭವದ ವಿಡಿಯೋವನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ತಮ್ಮ ಸ್ವಿಮಿಂಗ್ ಅನುಭವವನ್ನ ಎಲ್ಲರೊಟ್ಟಿಗೆ ಇದೀಗ ಹಂಚಿಕೊಂಡಿದ್ದಾರೆ ಅಂತಲೂ ಹೇಳಬಹುದು. ಚೈತ್ರಾ ಬೋಲ್ಡ್ ಯಾಕೆ ಚೈತ್ರಾ ಆಚಾರ್ ತುಂಬಾನೆ ಬೋಲ್ಡ್ ಅನಿಸುತ್ತಾರೆ. ವಿಶೇಷ ಕಾನ್ಸೆಪ್ಟ್ಗಳ ಫೋಟೋ ಶೂಟ್ನಲ್ಲೂ ಅಷ್ಟೇ ಧೈರ್ಯವಾಗಿಯೇ ಭಾಗಿ ಆಗುತ್ತಾರೆ. ಅದನ್ನ ಅಷ್ಟೇ ಪ್ರೀತಿಯಿಂದಲೂ ಮಾಡುತ್ತಾರೆ. ಹಾಗಾಗಿಯೇ ಒಂದು ತಿಂಗಳಲ್ಲಿ ಹತ್ತು ಹಲವು ವಿಶೇಷ ಕಾನ್ಸೆಪ್ಟ್ನ ಫೋಟೋಗಳೂ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗ್ತಾನೇ ಇರುತ್ತವೆ. ಚೈತ್ರಾ ಆಚಾರ್ ಸದ್ಯ ತಮಿಳಿನ ಎರಡು ಸಿನಿಮಾ ಒಪ್ಪಿದ್ದಾರೆ. ಇದರಲ್ಲಿ ಒಂದು ಚಿತ್ರದಲ್ಲಿ ಸಿದ್ಧಾರ್ಥ ಇದ್ದಾರೆ. ಸಿದ್ಧಾರ್ಥ ಜೊತೆಗೆ ನಟಿಸಬೇಕು ಅನ್ನೋ ಕನಸು ಈ ಮೂಲಕ ಈಗ ಈಡೇರಿದೆ ನೋಡಿ. ಉತ್ತರಕಾಂಡ ಎಲ್ಲಿಗೆ ಬಂತು ಉತ್ತರಕಾಂಡ ಚಿತ್ರದ ಒಂದು ಹಂತ ಚಿತ್ರೀಕರಣ ಆಗಿದೆ. ವಿಜಯಪುರ್ ಹಾಗೂ ಬೆಳಗಾವಿಯಲ್ಲಿ ಚಿತ್ರೀಕರಣ ಆಗಿದೆ. ಆದರೆ, ಎರಡನೇ ಹಂತದ ಚಿತ್ರೀಕರಣ ತಡವಾಗಿದೆ. ಅದು ಯಾವಾಗ ಅನ್ನೋ ಕುತೂಹಲ ಕೂಡ ಇದೆ. ಇನ್ನುಳಿದಂತೆ ಈ ಚಿತ್ರದಲ್ಲಿ ಚೈತ್ರಾ ಆಚಾರ್ ಅದ್ಭುತ ರೋಲ್ ಮಾಡಿದ್ದಾರೆ ಅಂತಲೂ ಹೇಳಬಹುದು. ಒಟ್ಟಾರೆ, ಚೈತ್ರಾ ಆಚಾರ್ ತಮ್ಮ ಸಿನಿ ಜರ್ನಿಯಲ್ಲಿ ಒಳ್ಳೆ ಸಿನಿಮಾಗಳನ್ನೆ ಆಯ್ಕೆ ಮಾಡುತ್ತಿದ್ದಾರೆ. ವಿಭಿನ್ನ ಅನಿಸೋ ಫೋಟೋ ಶೂಟ್ಗಳಲ್ಲೂ ಭಾಗಿ ಆಗುತ್ತಿದ್ದಾರೆ. ಈ ಮೂಲಕ ಹೆಚ್ಚು ಹೆಚ್ಚು ಆ್ಯಕ್ಟೀವ್ ಕೂಡ ಆಗಿರುತ್ತಾರೆ ಅಂತಲೂ ಹೇಳಬಹುದು. None
Popular Tags:
Share This Post:
What’s New
Spotlight
Today’s Hot
-
- October 16, 2024
-
- October 16, 2024
-
- October 16, 2024
Yatnal: ಬಸನಗೌಡ ಪಾಟೀಲ್ ಯತ್ನಾಳ್ಗೆ ಸಂಕಷ್ಟ! ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆ
- By Sarkai Info
- October 16, 2024
Featured News
Latest From This Week
Subscribe To Our Newsletter
No spam, notifications only about new products, updates.