NEWS

Bigg Boss Kannada: ಬಿಗ್ ಬಾಸ್  ಮನೆಗೆ ಬಂತು ಶೂ, ಬ್ಯಾಗ್:  ಕೊರಿಯರ್ ಬಂದಿದ್ದು ಯಾರಿಗೆ?

ಕಲರ್ಸ್‌ ಕನ್ನಡದಲ್ಲಿ (Colors Kannada) ಬಿಗ್‌ ಬಾಸ್‌ ಸೀಸನ್‌ 11 (Bigg Boss Kannada 11) ಮೂರನೇ ವಾರ ಕಂಪ್ಲೀಟ್‌ ಮಾಡಲು ಸಜ್ಜಾಗುತ್ತಿದೆ. ಈಗಾಗಲೇ ಹಲವಾರು ಪ್ರೋಮೋಗಳು ಔಟ್‌ (Promo Out) ಆಗಿವೆ. ಜತೆಗೆ ಜಗದೀಶ್‌ ಹಾಗೇ ರಂಜಿತ್‌ ಅವರು ಮನೆಯಿಂದ ಔಟ್‌ ಆಗಿದ್ದಾರೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ ಇದರ ಬೆನ್ನಲ್ಲೇ ಬಿಗ್‌ ಬಾಸ್‌ ಮನೆಗೆ ಶೂ ಹಾಗೂ ಬ್ಯಾಗ್‌‌ ಕೊರಿಯರ್‌ (courier) ಬಂದಿದೆ ಎನ್ನಲಾಗುತ್ತಿದೆ. ಹಾಗಾದ್ರೆ ಈ ಕೊರಿಯರ್‌ ಯಾವ ಸ್ಪರ್ಧಿಗೆ? ಬಿಗ್ ಬಾಸ್ ಸೀಸನ್ 11 ಮನೆಯ ಅಡ್ರೆಸ್ ಕೊರಿಯರ್‌‌ಬಂದಿದೆ ಎನ್ನಲಾಗುತ್ತಿದೆ. ಶೂ, ಬ್ಯಾಗ್‌ಗಳನ್ನು ಬಿಗ್ ಬಾಸ್ ಮನೆಗೆ ಕೊರಿಯರ್ ಬಾಯ್ ತಲುಪಿಸಿದ್ದಾರೆ ಎನ್ನಲಾಗಿದೆ. ಪ್ಲಿಪ್ ಕಾರ್ಟ್ ನಿಂದ ಬಿಗ್ ಬಾಸ್ ಮನೆಗೆ ಅರ್ಡರ್ ಮಾಡಿದ್ಯಾರು? ಎಂಬ ಪ್ರಶ್ನಗೆ ಇನ್ನೂ ಉತ್ತರ ಸಿಕ್ಕಿಲ್ಲ. ಇನ್ನು ಈ ಬಗ್ಗೆ ಬಿಗ್‌ ಬಾಸ್‌ ಯಾವುದೇ ಪ್ರೋಮೋ ಕೂಡ ಹಂಚಿಕೊಂಡಿಲ್ಲ. ಬಿಡದಿಯ ಹೊರವಲಯದಲ್ಲಿ ಬಿಗ್‌ ಬಾಸ್‌ ಮನೆ ಇದೆ. ಜಗದೀಶ್‌‌‌‌-ರಂಜಿತ್‌ ಔಟ್‌‌? ಕಳೆದ ಸಂಚಿಕಯಲ್ಲಿ ಜಗದೀಶ್‌ ಅವರು ಮನೆಯ ಸ್ಪರ್ಧಿಗಳೊಂದಿಗೆ ಕೂಗಾಡಿಕೊಂಡಿದ್ದರು. ಉಗ್ರಂ ಮಂಜು ಹಾಗೂ ಚೈತ್ರಾ ಜತೆಗೆ ಭಾರಿ ಎಗರಾಡಿದ್ದರು. ಜಗದೀಶ್‌ ಅವರು ಮೊದಲಿಗೆ ಬಿಗ್‌ ಬಾಸ್‌ ಮನೆ ಬಗ್ಗೆ ಇಲ್ಲ ಸಲ್ಲದ್ದು ಆರೋಪ ಮಾಡಿದ್ದಾರೆ. ಈ ಬಗ್ಗೆ ಉಗ್ರಂ ಮಂಜು ಹಾಗೂ ಉಳದಿ ಸ್ಪರ್ಧಿಗಳು ಬಿಗ್‌ ಬಾಸ್‌ ಮನೆ ಬಗ್ಗೆ ಕೇವಲ ಮಾತನಾಡಬಾರದು ಎಂದು ತಾಕೀತು ಹಾಕಿದರು. ಆದರೆ ಜಗದೀಶ್‌ ಅವರು ಅಲ್ಲಿಗೆ ಸುಮ್ಮನೇ ಆಗಿಲ್ಲ. ಅಷ್ಟರಲ್ಲಿ ಬಿಗ್‌ ಬಾಸ್‌ ಕನ್ಫೇಷನ್‌‌ ರೂಮ್‌ ಗೆ ಕರೆದಿದ್ದಾರೆ. ಇದನ್ನೂ ಓದಿ: Bigg Boss Kannada: ಆಕೆಯ ವಿಚಾರಕ್ಕೆ ಜಗದೀಶ್‌-ರಂಜಿತ್‌ ನಡುವೆ ಗಲಾಟೆ, ಅವರನ್ನೂ ಮನೆಗೆ ಕಳುಹಿಸಿ ಅಂತಿದ್ದಾರೆ ಫ್ಯಾನ್ಸ್! ಬಳಿಕ ಮತ್ತೆ ಚೈತ್ರಾ ಅವರ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡಿದ್ದಾರೆ. ಜಗದೀಶ್‌ ಇಲ್ಲದೇ ಇರೋ ಸಮಯದಲ್ಲಿ ರಂಜಿತ್‌ ಅವರು ಜಗದೀಶ್‌ ಒದೆ ತಿನ್ನುತ್ತಾರೆ ಎಂದಿದ್ದಾರೆ. ಬಳಿಕ ಇದೇ ಮೀತಿ ಮೀರಿ ಜಗಳ ಆಗಿರಬಹುದು. ಇದಕ್ಕೂ ಮುಂಚೆ ಬಿಗ್‌ ಬಾಸ್‌ ತಾನು ಬ್ರೇಕ್‌ ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ. ಕಾಲ್‌ ಮೂಲಕ ಶಿಶಿರ್‌ ಅವರಿಗೆ ಕರೆ ಮಾಡಿ ಸಲಹೆ ಕೂಡ ನೀಡಿದ್ದಾರೆ ಬಿಗ್‌ ಬಾಸ್‌. ಇದಲ್ಲದೇ ಜಗದೀಶ್‌ ಅವರನ್ನು ಸಮಾಧಾನ ಮಾಡಲು ಬಂದಿದ್ದ ಕ್ಯಾಪ್ಟನ್‌ ಶಿಶಿರ್‌ಹಾಗೂ ಉಗ್ರಂ ಮಂಜು ಅವರನ್ನೂ ತರಾಟೆಗೆ ತೆಗೆದುಕೊಂಡಿದ್ದರು.ಇಷ್ಟೇ ಮಾತ್ರವಲ್ಲ ದೊಡ್ಮನೆ ರಣಾಂಗಣ ಆಗಿದೆ. ಲಾಯರ್ ಜಗದೀಶ್ ಮಾತು ಟಾರ್ಚರ್ ಆಗುತ್ತಿವೆ. ಮನೆ ಮಂದಿ ಸಿಟ್ಟಾಗುತ್ತಿದ್ದಾರೆ. ಇದರಿಂದ ಎಲ್ಲರೂ ಜಗಳದ ಮೂಡ್‌ನಲ್ಲಿಯೇ ಇದ್ದಾರೆ. ಆದರೆ, ಇವರ ಜಗಳ ಕಂಟ್ರೋಲ್‌ ಆಗದೇ ಇದ್ದಾಗ, ಸ್ವತಃ ಬಿಗ್ ಬಾಸ್ ಭಯಂಕರ ಸಿಟ್ಟಾಗಿದ್ದಾರೆ. ಎಲ್ಲರೂ ಸುಮ್ನೆ ಇರಬೇಕು.. ಎಲ್ಲರೂ ಸೋಪಾದಲ್ಲಿ ಕುಳಿತುಕೊಳ್ಳಿ, ಯಾರೂ ಸದ್ದು ಮಾಡೋ ಹಂಗಿಲ್ಲ ಅಂತಲೇ ಬಿಗ್ ಬಾಸ್ ಸಿಟ್ಟಿಗೆದ್ದೇ ಹೇಳಿದ್ದಾರೆ.ಮನೆಯಲ್ಲಿ ನಿಜಕ್ಕೂ ಏನಾಯ್ತು? ಹೊಡೆದಾಟ ಆಗಿದ್ದು ಹೌದಾ? ಜಗದೀಶ್ ಔಟ್ ಆಗಿರೋದು ನಿಜವೇ? ಇವೆಲ್ಲದಕ್ಕೂ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.