ಬಿಗ್ ಬಾಸ್ ಮನೆ ಧಗ...ಧಗ... ಸಹನೆ ಕಳೆದುಕೊಂಡ ಮನೆ ಮಂದಿ; ರೊಚ್ಚಿಗೆದ್ದ ಲಾಯರ್ ಜಗದೀಶ್! ಬಿಗ್ ಬಾಸ್ (Bigg Boss) ಜಗದೀಶ್ (Jagadish) ಮನೆಯಿಂದ ಹೊರಟು ನಿಂತಿದ್ದಾರೆ. ಮನೆಯ ಕ್ಯಾಮರಾ ಮುಂದೆ ಬಿಗ್ ಬಾಸ್ಗೇನೆ ಬೈಯುತ್ತಿದ್ದಾರೆ. ಇದರಿಂದ ಇಡೀ ಮನೆಯ ಸದಸ್ಯರು ಗರಂ ಆಗಿದ್ದಾರೆ. ಜಗಳಕ್ಕೆ ರೆಡಿ ಆಗಿದ್ದಾರೆ. ಉಗ್ರಂ ಮಂಜು (Ugramm Manju) ಹಾಗೂ ರಂಜಿತ್ ಕುಮಾರ್ ಮುಖಾ-ಮುಖಿಯಾಗಿಯೇ ಜಗದೀಶ್ ಗೆ (Jagadish) ಟಕ್ಕರ್ ಕೊಟ್ಟಿದ್ದಾರೆ. ಆದರೆ, ಜಗದೀಶ್ ಏನೂ ಭಯಪಟ್ಟಿಲ್ಲ. ಬದಲಾಗಿ ತಮ್ಮ ಎಂದಿನಗತ್ತಿನಲ್ಲಿಯೇ ಇದ್ದಾರೆ. ತಮ್ಮ ವಾದವನ್ನು ಮುಂದುವರೆಸಿದ್ದಾರೆ. ಆದರೆ, ಇದರ ಮಧ್ಯೆ ಬಿಗ್ ಬಾಸ್ ಬಂದಿದ್ದಾರೆ. ಫೋನ್ ಮೂಲಕವೇ ಶಿಶಿರ್ಗೆ ಹೇಳಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಟು ನಿಂತ ಜದೀಶ್ ಅವರಿಗೆ ತಿಳುವಳಿಕೆ ಹೇಳುವಂತೆ ಜವಾಬ್ದಾರಿ ಕೊಟ್ಟಿದ್ದಾರೆ. ಆದರೆ, ಮುಂದೇನ್ ಆಯಿತು ಅನ್ನುವ ವಿವರ ಇಲ್ಲಿದೆ ಓದಿ. ಮನೆಯಲ್ಲಿ ಜಗಳ ಮತ್ತು ಜಗಳ… ಹೌದು, ದೊಡ್ಮನೆಯಲ್ಲಿ ಹಲ್ ಚಲ್ ಎದ್ದಿದೆ. ಜಗದೀಶ್ ರಾಂಗ್ ಆಗಿದ್ದಾರೆ. ಮಾತ್ ಆಡೋದನ್ನ ನಿಲ್ಲಿಸುತ್ತಲೇ ಇಲ್ಲ. ಆದರೆ, ಮನೆ ಮಂದಿ ಕೂಡ ರೊಚ್ಚಿಗೆದ್ದಿದ್ದಾರೆ. ಉಗ್ರಂ ಮಂಜು ಅಂತೂ ಟಕ್ಕರ್ ಕೊಡೋಕೆ ನಿಂತು ಬಿಟ್ಟಿದ್ದಾರೆ. ಹೊಡೆಯೋದು ಒಂದೇ ಬಾಕಿ ನೋಡಿ.. ಆದರೆ, ಹೊಡೆಯೋಕೆ ಎಲ್ಲರೂ ಸಜ್ಜಾಗಿದ್ದಾರೆ. ರಂಜಿತ್ ಕುಮಾರ್ ಅಂತೂ ಹೊಡೆಯೋಕೆ ರೆಡಿ ಆಗಿದ್ದಾರೆ. ಚೈತ್ರಾ ಕುಂದಾಪುರ್ ಕಣ್ಣಿನಿಂದಲೇ ಕೆಕ್ಕರಿಸಿದ್ದಾರೆ. ಇದರ ಮಧ್ಯೆ ಜಗದೀಶ್ ಅವರ ಮನಸ್ಸು ಬದಲಿಸೋ ಕೆಲಸವನ್ನ ಶಿಶಿರ್ ಮಾಡಿದ್ದಾರೆ. ಇದನ್ನೂ ಓದಿ: Amala Paul: ಅಮ್ಮ-ಮಗನ ಚೆಂದದ ಫೋಟೋಶೂಟ್, ಸೂಪರ್ ಮಾಮ್ ಅಮಲಾ ಪೌಲ್ ಅಂತಿದ್ದಾರೆ ಫ್ಯಾನ್ಸ್! ಶಿಶಿರ್ ಸಹನೆ ಮೆಚ್ಚಿದ ಬಿಗ್ ಬಾಸ್ ಬಿಗ್ ಬಾಸ್ ಮನೆಯ ವಾತಾವರಣ ಬದಲಾಗಿದೆ. ಇಡೀ ಮನೆ ಧಗ..ಧಗ ಅಂತಿದೆ. ಜಗದೀಶ್ ಅವರನ್ನ ಮನೆಯ ಕನ್ಫೆಷನ್ ರೂಮ್ಗೆ ಕಳಿಸೋವಲ್ಲಿ ಶಿಶಿರ್ ಸಕ್ಸಸ್ ಆಗಿದ್ದಾರೆ. ಇದನ್ನ ನೋಡಿದ ಬಿಗ್ ಬಾಸ್ ತುಂಬಾನೆ ಖುಷಿ ಆಗಿದ್ದಾರೆ. ಶಿಶಿರ್ ನೀವು ಒಳ್ಳೆ ಕೆಲಸ ಮಾಡಿದ್ದೀರಿ. ಇಂತಹ ಸಮಯದಲ್ಲಿ ಸಹನೆ ಕಾಪಾಡಿಕೊಂಡಿದ್ದೀರಿ. ನಿಜಕ್ಕೂ ಖುಷಿ ಆಗಿದೆ. ಇಡೀ ಮನೆಯ ಸದಸ್ಯರು ಸಹನೆ ಕಳೆದುಕೊಳ್ಳದೆ ಇರುವಂತೆ ಹೇಳಿ ಎಂದು ಬಿಗ್ ಬಾಸ್ ಹೇಳಿದ್ದಾರೆ. ಜಗದೀಶ್ ಹಿಂಗ್ ಯ್ಯಾಕ್ ಆದ್ರು ಲಾಯರ್ ಜಗದೀಶ್ ಯಾಕೆ ಹಿಂಗೆ ಮಾಡ್ರು. ಸಿಟ್ಟಿಗೆದ್ದು ಮತ್ತೆ ಮನೆಯಿಂದ ಹೋಗುತ್ತೇನೆ ಅಂತಿದ್ದಾರೆ. ಕ್ಯಾಮರಾ ಮುಂದೆ ಬಿಗ್ ಬಾಸ್ಗೇನೆ ಬೈದಿದ್ದಾರೆ. ಇದರಿಂದ ಮನೆಯ ಇತರ ಸದ್ಯರಿಗೆ ಬೇಸರ ಆಗಿದೆ. ಇನ್ನೇನು ಹೊಡೆದಾಡೋದು ಒಂದು ಬಾಕಿ ಇತ್ತು. ಆದರೆ, ಬಿಗ್ ಬಾಸ್ ಕ್ಯಾಪ್ಟನ್ ಶಿಶಿರ್ ಇದನ್ನ ಹ್ಯಾಂಡಲ್ ಮಾಡಿದ್ದಾರೆ. ಫೋನ್ನಲ್ಲಿ ಬಿಗ್ ಬಾಸ್ ಹೇಳಿದಂತೆ ಕೇಳಿದ್ದಾರೆ. ಹಾಗಾಗಿಯೇ ಮನೆಯ ವಾತಾವರಣ ತಿಳಿ ಆಗಿದೆ. ಬ್ರೇಕ್ ಅಲ್ಲಿರೋ ಬಿಗ್ ಬಾಸ್ ಬಿಗ್ ಬಾಸ್ ಬ್ರೇಕ್ ಅಲ್ಲಿಯೇ ಇದ್ದಾರೆ. ಹಾಗಾಗಿಯೇ ಫೋನ್ ಮೂಲಕವೇ ಎಲ್ಲವನ್ನೂ ಹೇಳುತ್ತಿದ್ದಾರೆ. ಆದರೂ ಮನೆಯಲ್ಲಿ ಏನೇನೋ ಆಗುತ್ತಿದೆ. ಅದನ್ನ ಅಷ್ಟೇ ಸಹನೆಯಿಂದಲೇ ಶಿಶಿರ್ ಮ್ಯಾನೇಜ್ ಮಾಡುತ್ತಿದ್ದಾರೆ ಅಂತಲೂ ಹೇಳಬಹುದು. None
Popular Tags:
Share This Post:
What’s New
Spotlight
Today’s Hot
-
- October 16, 2024
-
- October 16, 2024
-
- October 16, 2024
Yatnal: ಬಸನಗೌಡ ಪಾಟೀಲ್ ಯತ್ನಾಳ್ಗೆ ಸಂಕಷ್ಟ! ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆ
- By Sarkai Info
- October 16, 2024
Featured News
Latest From This Week
Subscribe To Our Newsletter
No spam, notifications only about new products, updates.