ಇತಿ ಮಿತಿ ಮಿರಿದ ಸ್ಪರ್ಧಿಗಳ ವರ್ತನೆ; ಸದ್ದು ಎಂದು ಸಿಟ್ಟಿಗೆದ್ದ ಬಿಗ್ ಬಾಸ್! ಬಿಗ್ ಬಾಸ್ (Bigg Boss) ಮನೆಯಲ್ಲಿ ಜಗಳ ನಿಲ್ತಾನೆ ಇಲ್ಲ. ಜಗದೀಶ್ (Jagadish) ವರ್ತನೆಗೆ ಮನೆ ಮಂದಿ ಸಿಟ್ಟಾಗಿದ್ದಾರೆ. ಇನ್ನು ಸಹಿಸಿಕೊಳ್ಳಲು ಆಗೋದೇ ಇಲ್ಲ ಅನ್ನೋಮಟ್ಟಿಗೆ ರೊಚ್ಚಿಗೆದ್ದಿದ್ದಾರೆ. ಆದರೂ ಕ್ಯಾಪ್ಟನ್ ಶಿಶಿರ್ (Captain Shishir) ಎಲ್ಲವನ್ನೂ ಹ್ಯಾಂಡಲ್ ಮಾಡಿದ್ದಾರೆ. ಆದರೆ, ಇವರ ಜಗಳ ಮರು ದಿನವೂ ಮುಂದುವರೆದಿದೆ. ಮನೆಯ ಮಂದಿ ಮತ್ತೆ ಜಗಳಕ್ಕೆ ನಿಂತಿದ್ದಾರೆ. ತ್ರಿವಿಕ್ರಮ್ (Trivikram) ಹೋಗಲೆ ಬಾರಲೇ ಅಂತ ಜಗಳವಾಡಿದ್ದಾರೆ. ಉಗ್ರಂ ಮಂಜು ಅಂತೂ ಸರಿಯಾಗಿಯೇ ಟಕ್ಕರ್ ಕೊಡುತ್ತಿದ್ದಾರೆ. ಮಾನಸ ಅಂತೂ ಸಿಕ್ಕಿದ್ದೇ ಚಾನ್ಸು ಅಂತ ಜಗಳಕ್ಕೆ ನಿಂತಿದ್ದಾರೆ. ಇದೆಲ್ಲ ಕಂಟೆಂಟ್ ಕ್ರಿಯೇಟ್ ಮಾಡೋಕೆನಾ ಅನ್ನೋ ಅನುಮಾನವೂ ಇದೆ. ಈ ಎಲ್ಲದರ ಒಂದು ಚಿತ್ರಣ ಈ ಒಂದು ಸ್ಟೋರಿಯಲ್ಲಿದೆ ಓದಿ. ಇತಿ ಮತ್ತು ಮಿತಿ ಎರಡೂ ಮೀರಿದ ಸ್ಪರ್ಧಿಗಳು ದೊಡ್ಮನೆ ರಣಾಂಗಣ ಆಗಿದೆ. ಲಾಯರ್ ಜಗದೀಶ್ ಮಾತು ಟಾರ್ಚರ್ ಆಗುತ್ತಿವೆ. ಮನೆ ಮಂದಿ ಸಿಟ್ಟಾಗುತ್ತಿದ್ದಾರೆ. ಇದರಿಂದ ಎಲ್ಲರೂ ಜಗಳದ ಮೂಡ್ನಲ್ಲಿಯೇ ಇದ್ದಾರೆ. ಆದರೆ, ಇವರ ಜಗಳ ಕಂಟ್ರೋಲ್ ಆಗದೇ ಇದ್ದಾಗ, ಸ್ವತಃ ಬಿಗ್ ಬಾಸ್ ಭಯಂಕರ ಸಿಟ್ಟಾಗಿದ್ದಾರೆ. ಎಲ್ಲರೂ ಸುಮ್ನೆ ಇರಬೇಕು.. ಎಲ್ಲರೂ ಸೋಪಾದಲ್ಲಿ ಕುಳಿತುಕೊಳ್ಳಿ, ಯಾರೂ ಸದ್ದು ಮಾಡೋ ಹಂಗಿಲ್ಲ ಅಂತಲೇ ಬಿಗ್ ಬಾಸ್ ಸಿಟ್ಟಿಗೆದ್ದೇ ಹೇಳಿದ್ದಾರೆ. ಆಗಲೇ ಇಡೀ ವಾತಾವರಣ ತಿಳಿ ಆಗಿದೆ. ಆದರೆ, ಈ ಜಗಳ ಶುರು ಆಗಿದ್ದು ಯಾಕೆ ಗೊತ್ತಾ? ಇಲ್ಲಿದೆ ಓದಿ. ಇದನ್ನೂ ಓದಿ: Bigg Boss 11: ಬಿಗ್ ಬಾಸ್ ಮನೆ ಧಗ, ಧಗ! ಸಹನೆ ಕಳೆದುಕೊಂಡ ಮನೆ ಮಂದಿ; ರೊಚ್ಚಿಗೆದ್ದ ಲಾಯರ್ ಜಗದೀಶ್! ಧರ್ಮ ನಾಮಿನೇಷನ್ನಿಂದ ಜಗಳ ಶುರು ಕ್ಯಾಪ್ಟನ್ ಶಿಶಿರ್ ನಟ ಧರ್ಮ ಕೀರ್ತಿರಾಜರನ್ನ ನಾಮಿನೇಟ್ ಮಾಡಿದ್ದಾರೆ. ಇದನ್ನ ಕೇಳಿದ ಮನೆ ಮಂದಿ ಸುಮ್ಮನೆ ಇದ್ದರು. ಆದರೆ, ಅಲ್ಲಿಯೇ ಇದ್ದ ಜಗದೀಶ್ ಕೇಳಲೇ ಇಲ್ಲ. ನೀವು ಧರ್ಮ ಅವರನ್ನ ಟಾರ್ಗೆಟ್ ಮಾಡಿದ್ದೀರಿ ಅಂತಲೇ ದೂರಿದರು. ನಾಮಿನೇಷನ್ ಅನ್ನ ವಿರೋಧಿಸಿದರು. ಆದರೆ, ಅಲ್ಲಿವರೆಗೂ ಸುಮ್ಮನೆ ಕುಳಿತಿದ್ದ ಮಾನಸ ಆವಾಜ್ ಹಾಕಿದರು. ಎಲ್ಲದಕ್ಕೂ ನಡುವೆ ಬರ್ತಿಯಲ್ಲ ಅಂತಲೇ ಜಗಳಕ್ಕೆ ನಿಂತರು. ಅಲ್ಲಿಂದ ಎಲ್ಲರೂ ಈ ಒಂದು ಜಗಳದಲ್ಲಿ ಭಾಗಿ ಆದ್ರು. ನಟ ತ್ರಿವಿಕ್ರಮ್ ಹೋಗಲೆ ಅನ್ನೋ ಮಟ್ಟಿಗೆ ಹೋದ್ರು. ಉಗ್ರಂ ಮಂಜು ಅಂತೂ ಮುಖದ ಮೇಲೆ ಹೋಗಿ ಜಗಳಕ್ಕೆ ನಿಂತರು. ಜಗದೀಶ್ ಕಾಟ ಹೆಚ್ಚಾಯಿತೇ ಇಡೀ ಮನೆಯಲ್ಲಿ ಜಗದೀಶ್ ಕಾಟ ಹೆಚ್ಚಾದಂತೆ ಇದೆ. ಹಂಸಾನೇ ಈ ಒಂದು ಸತ್ಯವನ್ನ ಹೇಳಿದ್ದಾರೆ. ಬಿಗ್ ಬಾಸ್ ಟಾಸ್ಕ್ ಒಂದಾದ್ರೆ, ಜಗದೀಶ್ ಟಾರ್ಚರ್ ಬೇರೆ ಅಂತಲೂ ಹೇಳಿದ್ದಾರೆ. ಇದು ಎಲ್ಲರ ಮೇಲೆ ಪ್ರಭಾವ ಆಯಿತೋ ಏನೋ? ಮೊದಲೆಲ್ಲ ಸುಮ್ನೆ ಇದ್ದ ಮನೆ ಮಂದಿ ಇದೀಗ ಸಹಿಸಿಕೊಳ್ತಾನೇ ಇಲ್ಲ ನೋಡಿ. ಹಾಗಾಗಿಯೇ ಜಗದೀಶ್ ಪ್ರತಿ ಮಾತು ಮನೆ ಮಂದಿಗೆ ಸಾಕು ಅನಿಸಿ ಹೋಗಿದೆ. ಆ ಕಾರಣಕ್ಕೇನೆ ಮನೆಯಲ್ಲಿ ಜಗಳಗಳು ದಿನವೂ ಹೆಚ್ಚಾಗುತ್ತಿವೆ ಅಂತಲೇ ಹೇಳಬಹುದು. None
Popular Tags:
Share This Post:
What’s New
Spotlight
Today’s Hot
-
- October 16, 2024
-
- October 16, 2024
-
- October 16, 2024
Yatnal: ಬಸನಗೌಡ ಪಾಟೀಲ್ ಯತ್ನಾಳ್ಗೆ ಸಂಕಷ್ಟ! ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆ
- By Sarkai Info
- October 16, 2024
Featured News
Latest From This Week
Subscribe To Our Newsletter
No spam, notifications only about new products, updates.