NEWS

Bagheera Movie: ರಾಮ ಗುಣಗಳಿರುವ ರಾವಣಾಸುರ, ಅವನೇ 'ಬಘೀರ'! ಶ್ರೀಮುರಳಿ ಸಿನಿಮಾದ ಬಿಗ್ ಅಪ್ಡೇಟ್

ರಾಮನೂ ಇವನೇ, ಶಂಕರಣನೂ ಇವನೇ; ಬಘೀರ ಚಿತ್ರದ ಹಾಡಿನ ಝಲಕ್ ರಿವೀಲ್! ರೋರಿಂಗ್ ಸ್ಟಾರ್ ಶ್ರೀಮುರಳಿ (Sriimurali) ಅಭಿನಯದ ಬಘೀರ ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗುತ್ತಿದೆ. ಅಕ್ಟೋಬರ್ 17 ರಂದು ಬೆಳಗ್ಗೆ 10.35 ಕ್ಕೆ ರುಧೀರ ಧಾರಾ (Rudhira Dhaara) ಅನ್ನೋ ಹಾಡು ಹೊರಗೆ ಬರುತ್ತಿದೆ. ಇದಕ್ಕೂ ಪೂರಕ ಅನ್ನುವ ಹಾಗೆ ಎರಡು ಲೈನ್ ಕೂಡ ರಿವೀಲ್ ಆಗಿವೆ. ಹೊಂಬಾಳೆ ಸಂಸ್ಥೆ ತನ್ನ ಅಧಿಕೃತ ಪೇಜ್‌ನಲ್ಲಿಯೇ ಈ ಒಂದು ಹಾಡಿನ ವಿಡಿಯೋ ತುಣುಕು ಬಿಟ್ಟಿದೆ. ಆ ಎರಡು ಲೈನ್ ಕೂಡ ಇಲ್ಲಿಯೇ ಬರೆಯಲಾಗಿದೆ. ಅಜನೀಶ್ ಲೋಕನಾಥ್ ಸಂಗೀತದ ಈ ಚಿತ್ರದಲ್ಲಿ ಈಗ ಬಿಟ್ಟಿರೋ ವಿಡಿಯೋ (Video) ತುಣುಕಿನಲ್ಲಿ ಲಿರಿಕ್ಸ್ ಏನು ಇಲ್ಲ. ಬರೀ ಕಪ್ಪು ಚಿರತೆಯ ಘರ್ಜಿಸೋ ಸೌಂಡ್ ಇದೆ. ಇದು ನಿಜಕ್ಕೂ ಇಡೀ ಚಿತ್ರದ ಶ್ರೀಮುರಳಿ (Sriimurali) ಪಾತ್ರದ ಖದರ್ ಕಟ್ಟಿಕೊಡುವಂತೆ ಇದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ. ರಾಮ ಗುಣಗಳಿರುವ ಇವನೇ ರಾವಣಾಸುರ ಬಘೀರ ಚಿತ್ರದಲ್ಲಿ ಶ್ರೀಮುರಳಿ ಪಾತ್ರ ಪೊಲೀಸ್ ಪಾತ್ರವೇ ಆಗಿದೆ. ಆದರೆ, ದುಷ್ಟರನ್ನ ಸಂಹಾರ ಮಾಡೋಕೆ ಸೂಪರ್ ಮ್ಯಾನ್ ಬಘೀರನಾಗಿಯೂ ಕಾಣಿಸಿಕೊಡಿದ್ದಾರೆ. ಕಪ್ಪು ಚಿರತೆಗೆ ಇರೋ ಆ ತೀಕ್ಷಣತೆ ಶ್ರೀಮುರಳಿ ಪಾತ್ರದ ಕಣ್ಣಿನಲ್ಲಿ ಕಾಣಿಸುತ್ತದೆ. ಅದಕ್ಕೆ ಇರೋ ಆ ಸ್ಪೀಡ್ ಕೂಡ ಶ್ರೀಮುರಳಿ ರೋಲ್‌ ಅಲ್ಲಿ ಅಡಕವಾಗಿದೆ. ಇಂಡಿಯನ್ ಸೂಪರ್ ಹೀರೋ ರೀತಿನೇ ಬಘೀರನಾಗಿಯೇ ಶ್ರೀಮುರಳಿ ಇಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಈ ರೀತಿಯ ಪಾತ್ರದ ಪೋಷಣೆನೆ ಒಂದು ವಿಶೇಷ ಅನಿಸುತ್ತದೆ. ಕನ್ನಡಕ್ಕೆ ಇದು ಒಂದು ವಿಶೇಷ ಕಲ್ಪನೆನೆ ಆಗಿದೆ. ಕನ್ನಡದಲ್ಲಿ ಸೂಪರ್ ಹೀರೋ ಕಾನ್ಸೆಪ್ಟ್‌ನ ಚಿತ್ರಗಳು ಕಡಿಮೆನೆ ಬಿಡಿ. ಭಯವಿಟ್ರೆ ಭಯಂಕರ ಭಸ್ಮ ಮಾಡೋ ಶಂಕರ ಬಘೀರ ಚಿತ್ರದಲ್ಲಿ ಶ್ರೀಮುರಳಿ ಭಯಂಕರ ಭಸ್ಮ ಮಾಡೋ ಶಂಕರ ರೂಪದಲ್ಲೂ ಕಾಣಿಸುವಂತೆ ಇದೆ. ಅದರ ರೂಪ ರುಧೀರ ಧಾರಾ ಹಾಡಿನಲ್ಲಿಯೇ ಚಿತ್ರಣಗೊಂಡಂತೆ ಇದೆ. ಅಕ್ಟೋಬರ್-17 ರಂದು ಬೆಳಗ್ಗೆ 10.35ಕ್ಕೆ ರಿಲೀಸ್ ಆಗುತ್ತಿರೋ ಹಾಡಿನಲ್ಲಿಯೇ ಶ್ರೀಮುರಳಿ ಪಾತ್ರದ ಇನ್ನಷ್ಟು ವಿಚಾರ ತಿಳಿಯಲಿವೆ. ಈ ಹಾಡಿನ ಎರಡು ಸಾಲು ಹೀಗಿವೆ ಓದಿ. ಭಯವಿಟ್ರೆ ಭಯಂಕರ ಭಸ್ಮ ಮಾಡೋ ಶಂಕರ… ರಾಮ ಗುಣಗಳಿರುವ ಇವನೇ ರಾವಣಾಸುರ… ಅಜನೀಶ್ ಲೋಕನಾಥ್ ಸಂಗೀತ ಬಘೀರ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಕೊಟ್ಟಿದ್ದಾರೆ. ಎ.ಜೆ.ಶೆಟ್ಟಿ ಕ್ಯಾಮರಾವರ್ಕ್ ಮಾಡಿದ್ದಾರೆ. ಡಾಕ್ಟರ್ ಸೂರಿ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಡೈರೆಕ್ಟರ್ ಪ್ರಶಾಂತ್ ನೀಲ್ ಈ ಚಿತ್ರಕ್ಕೆ ಒನ್ ಲೈನ್ ಕೊಟ್ಟಿದ್ದಾರೆ. ಅದೇ ಒನ್ ಲೈನ್ ಇಟ್ಟುಕೊಂಡು ಡೈರೆಕ್ಟರ್ ಸೂರಿ ಕಥೆ-ಚಿತ್ರಕಥೆ ಮಾಡಿಕೊಂಡಿದ್ದಾರೆ. ಇದರೊಟ್ಟಿಗೆ ಡೈರೆಕ್ಷನ್ ಕೂಡ ಮಾಡಿದ್ದಾರೆ. ಅಕ್ಟೋಬರ್-31 ಕ್ಕೆ ಚಿತ್ರ ರಿಲೀಸ್ ಅಕ್ಟೋಬರ್ 31 ಕ್ಕೆ ಬಘೀರ ಚಿತ್ರ ರಿಲೀಸ್ ಆಗುತ್ತಿದೆ. ಬಹುಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ರಂಗಾಯಣ ರಘು, ರುಕ್ಮಿಣಿ ವಸಂತ್, ಅಚ್ಯುತ್ ಕುಮಾರ್, ಗರುಡ ರಾಮ್ ಸೇರಿದಂತೆ ಇನ್ನು ಹಲವರು ಕಲಾವಿದರು ಈ ಚಿತ್ರದಲ್ಲಿದ್ದಾರೆ. ಇವರೆಲ್ಲ ಈ ಚಿತ್ರದ ಈ ವರ್ಷದ ಮತ್ತೊಂದು ಬಹು ನಿರೀಕ್ಷಿತ ಕನ್ನಡ ಸಿನಿಮಾನೆ ಆಗಿದೆ ಅಂತಲೂ ಹೇಳಬಹುದು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.