ಕಲರ್ಸ್ ಕನ್ನಡ ವಾಹಿನಿಯಲ್ಲಿ (Colors Kannada) ಪ್ರಸಾರ ಕಾಣುತ್ತಿರುವ ರಾಮಾಚಾರಿ (Ramachari Serial) ಧಾರಾವಾಹಿ ಮಹಾ ತಿರುವು ಪಡೆದುಕೊಂಡಿದೆ. ಈಗಾಗಲೇ ಸತ್ಯಭಾಮಾ (Sathya bhama) ಬಾಯಿಂದ ಸತ್ಯ (truth Reveal) ಹೊರ ಬಂದಿದೆ. ವೈಶಾಖಾಗೆ (Vaishakha) ಮುಖಭಂಗವಾಗಿದೆ. ಅದು ಅಲ್ಲದೇ ಇದೀಗ ಮನೆಯವರು ಬರುವ ಮುನ್ನವೇ ಆತ್ಮಹತ್ಯೆ ಮಾಡಿಕೊಳ್ತಾರಾ ನಾರಾಯಣಾಚಾರ್? ಎಂಬ ಕುತೂಹಲ ವೀಕ್ಷಕರಲ್ಲಿದೆ. ನಾರಾಯಣ ಆಚಾರ್ ಮತ್ತೊಂದು ಮದುವೆಯಾಗಿಲ್ಲ ಸದ್ಯ ಧಾರಾವಾಹಿಯಲ್ಲಿ ನಾರಾಯಣ ಆಚಾರ್ ಮತ್ತೊಂದು ಮದುವೆಯಾಗಿಲ್ಲ ಎಂಬ ಸತ್ಯ ರಿವೀಲ್ ಆಗಿದೆ. ಕಟ್ಟಿಕೊಂಡ ಪತ್ನಿಗೆ ನಾರಾಯಣಾಚಾರ್ ದ್ರೋಹ ಮಾಡಿದ್ದಾರೆ ಎಂದು ವೀಕ್ಷಕರು ಊಹಿಸಿದ್ದರು. ಈ ಸತ್ಯದ ಬೆನ್ನ ಹಿಂದೆ ಹೊರಟ್ಟಿದ್ದು ಚಾರು, ರಾಮಾಚಾರಿ. ಇದಕ್ಕೂ ಮುಂಚೆ ವೈಶಾಖ ಇಷ್ಟೂ ದಿನ ನಾರಾಯಣಾಚಾರ್ಗೆ ಎರಡನೇ ಪತ್ನಿ ಇದ್ದಾಳೆ. ಅವಳೇ ಸತ್ಯಭಾಮಾ ಎಂದೆಲ್ಲ ಹೇಳಿದ್ದಳು. ಆದರೆ ಈಗ ಅದೆಲ್ಲ ಸುಳ್ಳು ಎಂಬುದು ರಿವೀಲ್ ಆಗಿದೆ. ಸತ್ಯಭಾಮಾ ಜಾನಕಿಯ ಸ್ನೇಹಿತೆ! ಸತ್ಯ ಭಾಮ ಮನೆಗೆ ಜಾನಕಿ ಬಂದಾಗ, ತನ್ನ ಆಪ್ತಗೆಳತಿ ಸತ್ಯ ಎಂಬುದು ಜಾನಕಿಗೆ ಗೊತ್ತಾಗುತ್ತದೆ. ಹಾರ್ಮೋನಿಯಂ ವಾದಕ ವೇಣುಗೋಪಾಲ್ ಅವರನ್ನ ಸತ್ಯಭಾಮೆ ಪ್ರೀತಿಸುತ್ತಿದ್ದಳು. ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದಳು. ಆದರೆ ಮದುವೆ ಆಗೋ ಅಷ್ಟರಲ್ಲಿ ಮನೆಯವರು ಬಂದು ವೇಣುಗೋಪಾಲ್ರನ್ನ ಕರೆದುಕೊಂಡು ಹೋಗಿದ್ದರು. ಹೀಗಾಗಿ ಜಗತ್ತಿನ ಕಣ್ಣಿಗೆ ನಾರಾಯಣಾಚಾರ್ ಅಪ್ಪನಾಗಿ ಇರುವ ಸತ್ಯ ಹೊರ ಹಾಕಿದ್ದಾಳೆ. ಒಟ್ಟಿನಲ್ಲಿ ಸತ್ಯಭಾಮೆ ನಾರಾಯಣ ಆಚಾರ್ ಅವರ ಈ ಗುಣವನ್ನು ರಿವೀಲ್ ಮಾಡಿದ್ದಾರೆ. ಆದರೆ ವೈಶಾಖ ತಲೆ ತಗ್ಗಿಸುವಂತಾಗಿದೆ. ತನ್ನ ತಂದೆ ಯಾವ ತಪ್ಪು ಮಾಡಿಲ್ಲ ಅಂತ ಗೊತ್ತಾದ್ಮೇಲೆ, ವೈಶಾಖಳನ್ನ ದಾರಿ ಮಧ್ಯೆಯೇ ಬಿಟ್ಟು ಮನೆ ಕಡೆಗೆ ಹೊರಟಿದ್ದಾನೆ ಕೋದಂಡ. ಇದನ್ನೂ ಓದಿ: Renukaswamy: ರೇಣುಕಾಸ್ವಾಮಿ ಪತ್ನಿಗೆ ಗಂಡು ಮಗು ಜನನ, ಮಗನಿಲ್ಲದ ನೋವಿನಲ್ಲಿದ್ದ ಮನೆಯಲ್ಲೀಗ ಸಂತಸ ಸದ್ಯ ಪತ್ನಿ ಹಾಗೂ ಕುಟುಂಬಕ್ಕೆ ಮೋಸ ಮಾಡಿದೆ ಎಂಬ ನೋವಿನಲ್ಲಿರುವ ನಾರಾಯಣಾಚಾರ್ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಪ್ರೋಮೋ ಕೂಡ ಔಟ್ ಆಗಿದೆ. ಇದೀಗ ಮನೆಯವರೆಲ್ಲರೂ ಬಂದು ತಡೀತಾರಾ ಎನ್ನುವ ಕುತೀಹಲ ವೀಕ್ಷಕರಲ್ಲಿದೆ. ಕಥೆ ಏನು? ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಧಾರಾವಾಹಿಯಾಗಿದೆ. ಈ ಧಾರಾವಾಹಿಯಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಅವಳಿ ಜವಳಿ ಮಕ್ಕಳಿರುತ್ತಾರೆ. ಅವರು ಕುಟುಂಬದಿಂದ ದೂರಾಗಿ ಹೇಗೆ ತಮ್ಮ ಜೀವನವನ್ನು ನಿಭಾಯಿಸುತ್ತಾರೆ ಅನ್ನೋದೇ ಈ ಧಾರಾವಾಹಿಯ ಮುಖ್ಯ ಕಥೆಯಾಗಿದೆ. ಅದರ ಜೊತೆ ನಾಯಕಿ ಚಾರು ಹೇಗೆ ತನ್ನ ಕರ್ತವ್ಯವನ್ನು ನಿಭಾಯಿಸಿ ಎಲ್ಲಾ ಪರಿಸ್ಥಿತಿಯನ್ನು ತಿಳಿಗೊಳಿಸುತ್ತಾಳೆ ಎಂಬುದೂ ಮುಖ್ಯವಾಗಿದೆ. ಇದೀಗ ವೀಕ್ಷಕರ ನೆಚ್ಚಿನ ಸೀರಿಯಲ್ ರಾಮಾಚಾರಿ ಯಶಸ್ವಿ 700 ಸಂಚಿಕೆಗಳನ್ನ ಪೂರೈಸಿದೆ. ಟಿಆರ್ಪಿಯಲ್ಲಿ ಒಳ್ಳೆಯ ಸ್ಥಾನಲದಲ್ಲಿದೆ. ಒಟ್ಟಿನಲ್ಲಿ ಇಂದಿನ ಸಂಚಿಕೆ ತುಂಬ ಕುತೂಹಲಕರವಾಗಿದೆ. None
Popular Tags:
Share This Post:
What’s New
Spotlight
Today’s Hot
-
- October 16, 2024
-
- October 16, 2024
-
- October 16, 2024
Yatnal: ಬಸನಗೌಡ ಪಾಟೀಲ್ ಯತ್ನಾಳ್ಗೆ ಸಂಕಷ್ಟ! ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆ
- By Sarkai Info
- October 16, 2024
Featured News
Latest From This Week
Subscribe To Our Newsletter
No spam, notifications only about new products, updates.