ದೇವೇಂದ್ರ ಫಡ್ನವೀಸ್-ಉದ್ಧವ್ ಠಾಕ್ರೆ (ಸಂಗ್ರಹ ಚಿತ್ರ) ಮುಂಬೈ: ಮಹಾರಾಷ್ಟ್ರ ಚುನಾವಣೆ (Maharashtra Election) ರಣಕಣ ರಂಗೇರುತ್ತಿದೆ. ಈಗಾಗಲೇ ಬಿಜೆಪಿ (BJP) ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಮಾಡಿದ್ದು, ಘಟಾನುಘಟಿಗಳಿಗೆ ಟಿಕೆಟ್ ನೀಡಿದೆ. ಅತ್ತ ಶಿವಸೇನೆ (Shiva Sena), ಕಾಂಗ್ರೆಸ್ (Congress), ಎನ್ಸಿಪಿ (NCP) ಸೇರಿ ಮೈತ್ರಿ ಪಕ್ಷಗಳೂ ಕೂಡ ಅಬ್ಬರದ ಪ್ರಚಾರ ನಡೆಸುತ್ತಿವೆ. ಈ ಹೊತ್ತಲ್ಲೇ ಮೈತ್ರಿ ಪಕ್ಷಕ್ಕೆ ಶಾಕ್ ನೀಡೋ ಸುದ್ದಿಯೊಂದು ಮಹಾರಾಷ್ಟ್ರ ರಾಜ್ಯ ರಾಜಕೀಯದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಈ ಬಾರಿ ಚುನಾವಣೆಯಲ್ಲಿ ಉದ್ಧವ್ ಠಾಕ್ರೆ (Uddhav Thackeray) ನೇತೃತ್ವದ ಶಿವಸೇನೆ ಮತ್ತೆ ಬಿಜೆಪಿಯೊಂದಿಗೆ ಮೈತ್ರಿಗೆ ಸಜ್ಜಾಗಿದ್ಯಾ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣ ಮಾಜಿ ಮುಖ್ಯಮಂತ್ರಿ, ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಡಿಸಿಎಂ ದೇವೇಂದ್ರ ಫಡ್ನವೀಸ್ (Devendra Fadnavis) ಅವ್ರನ್ನು ಭೇಟಿಯಾಗಿದ್ದಾರೆ ಎಂಬ ವೈರಲ್ ಸುದ್ದಿ! ದೇವೇಂದ್ರ ಫಡ್ನವೀಸ್ ಭೇಟಿಯಾದ ಉದ್ಧವ್ ಠಾಕ್ರೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹೊತ್ತಲ್ಲೇ I.N.D.I.A. ಒಕ್ಕೂಟಕ್ಕೆ ಭಾರೀ ಆಘಾತ ಎದುರಾಗಿದೆ. ಎನ್ಸಿಪಿ ಹಾಗೂ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಮತ್ತೊಮ್ಮೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲಿದೆಯಾ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣ ದೇವೇಂದ್ರ ಫಡ್ನವೀಸ್ ಅವ್ರನ್ನು ಉದ್ಧವ್ ಠಾಕ್ರೆ ಭೇಟಿಯಾಗಿದ್ದಾರೆ ಎಂಬ ವಿಚಾರ. ಅಮಿತ್ ಶಾ ಭೇಟಿ ಹೊತ್ತಲ್ಲೇ ಮಹತ್ವದ ಬೆಳವಣಿಗೆ ಮಹತ್ವದ ಬೆಳವಣಿಗೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರ ಮುಂಬೈ ಭೇಟಿಯ ಸಂದರ್ಭದಲ್ಲಿ ಶಿವಸೇನಾ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಅವರು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾಹಿತಿಯ ಪ್ರಕಾರ ಉಭಯ ನಾಯಕರು ಸಭೆ ನಡೆಸಿ, ಮಹತ್ವದ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: PM Modi: ಭವಿಷ್ಯದಲ್ಲಿ ಎಐನಿಂದ ಭಾರತಕ್ಕೆ ತುಂಬಾ ಪ್ರಯೋಜನೆ ಇದೆ; ಪ್ರಧಾನಿ ಮೋದಿ ವಿಶ್ವಾಸದ ಮಾತು ಸಂಜಯ್ ರಾವತ್ ಹೇಳಿದ್ದೇನು? ಈ ಹೇಳಿಕೆಗಳ ನಡುವೆ, ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಅವರು ಠಾಕ್ರೆ ಮತ್ತು ಫಡ್ನವಿಸ್ ನಡುವಿನ ಯಾವುದೇ ಅಂತಹ ಸಭೆಯು ನಡೆದಿಲ್ಲ ಅಂತ ಹೇಳಿದ್ದಾರೆ. ಇನ್ನು ಮಾಧ್ಯಮ ಸಂವಾದದ ಸಮಯದಲ್ಲಿ, ಶಿವಸೇನೆ (ಯುಬಿಟಿ) ನಾಯಕ ಕೂಡ ಎಲ್ಲರೂ ಮೊದಲು ರಾಷ್ಟ್ರೀಯ ಹಿತಾಸಕ್ತಿ ಮತ್ತು ಮಹಾರಾಷ್ಟ್ರದ ಹಿತಾಸಕ್ತಿಯ ಬಗ್ಗೆ ಯೋಚಿಸಬೇಕು ಎಂದು ಹೇಳಿದ್ದಾರೆ. ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ “ಇದು ತ್ಯಾಗದ ಬಗ್ಗೆ ಅಲ್ಲ, ಇದು ರಾಷ್ಟ್ರೀಯ ಹಿತಾಸಕ್ತಿ ಮತ್ತು ಮಹಾರಾಷ್ಟ್ರದ ಹಿತಾಸಕ್ತಿಯ ಬಗ್ಗೆ… ನಾವು ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ಸಮಯದಲ್ಲಿ ತ್ಯಾಗಮಾಡಿದ್ದೇವೆ. ಏಕೆಂದರೆ ನಾವು ಸಂವಿಧಾನದ ಶತ್ರುಗಳನ್ನು ಸೋಲಿಸಬೇಕಾಗಿತ್ತು. ಇಂದು ನಾವು ದೊಡ್ಡ ನಿರ್ಧಾರ ತೆಗೆದುಹಾಕಬೇಕಾಗಿದೆ. ಅಧಿಕಾರದಿಂದ ಮಹಾರಾಷ್ಟ್ರದಲ್ಲಿ ಭ್ರಷ್ಟ ಸರ್ಕಾರವಾಗಿದೆ ಎಂದು ಅವರು ಹೇಳಿದ್ದಾರೆ. ಫಡ್ನವೀಸ್ ಸೇರಿ 99 ಮಂದಿಗೆ ಟಿಕೆಟ್ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ (Maharashtra Assembly Election) ಇನ್ನು ಒಂದೇ ತಿಂಗಳು ಬಾಕಿ ಉಳಿದಿದ್ದು, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯು ಈ ಬಾರಿ ಕಾಂಗ್ರೆಸ್ (Congress) ಹಾಗೂ ಬಿಜೆಪಿ (BJP) ಪಾಲಿಗೆ ಸವಾಲಿನಿಂದ ಕೂಡಿದೆ. ನವೆಂಬರ್ 20ರಂದು ಇಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಬಿಜೆಪಿ ಈಗಾಗಲೇ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ 99 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಿಸಲಾಗಿದೆ. None
Popular Tags:
Share This Post:
Weight Loss: ಈ ವಿಚಾರವನ್ನು ಕಂಟ್ರೋಲ್ ಮಾಡಿದ್ರೆ ತೂಕ ಇಳಿಸೋದು ಬಲು ಸುಲಭ!
- by Sarkai Info
- October 22, 2024
What’s New
Actress: ಪ್ರಿಯಕರನಿಗಾಗಿ ಮೂರುವರೆ ವರ್ಷದ ಬಾಲಕನ ಕಿಡ್ನ್ಯಾಪ್! ನಟಿ ಅಂದರ್
- By Sarkai Info
- October 21, 2024
Spotlight
Today’s Hot
-
- October 21, 2024
-
- October 21, 2024
-
- October 21, 2024
Featured News
Latest From This Week
Snake Bite: ಹಾವು ಕಚ್ಚಿದ್ರೆ ತಪ್ಪಿಯೂ ಈ ಆರು ಕೆಲಸ ಮಾಡದಿರಿ, ಜೀವಕ್ಕೇ ಮಾರಕ! ಎಚ್ಚರ!
NEWS
- by Sarkai Info
- October 17, 2024
Subscribe To Our Newsletter
No spam, notifications only about new products, updates.