ಕುಸಿತಗೊಂಡ ಸೇತುವೆ ಬಿಹಾರ: ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆಯೊಂದು ಉದ್ಘಾಟನೆಗೂ ಮೊದಲೇ (Bridge Collapse) ಕುಸಿದು ಬಿದ್ದ ಘಟನೆ ಬಿಹಾರದಲ್ಲಿ (Bihar Bridge Collapse) ನಡೆದಿದೆ. ಅಂದಹಾಗೆ ಸರ್ಕಾರದ ದುಡ್ಡನ್ನು ತಿಂದು ತೇಗಿ ಕಳಪೆ ಮಟ್ಟದ ಕಾಮಗಾರಿ ನಡೆಸಿದ ಪ್ರಕರಣಗಳು ಹೊರ ಬರುತ್ತಿರುವುದು ಬಿಹಾರದಲ್ಲಿ ಇದೇ ಮೊದಲೇನಲ್ಲ. ವರ್ಷದಲ್ಲಿ ಕನಿಷ್ಠ ಒಂದೆರಡು ಪ್ರಕರಣಗಳಾದರೂ ಬೆಳಕಿಗೆ ಬರುತ್ತದೆ. ಈ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯ ಪರಾರಿಯಾ ಗ್ರಾಮದಲ್ಲಿ ನಡೆದಿದ್ದು, ಬಕ್ರಾ ನದಿಗೆ ಅಡ್ಡಲಾಗಿ ಹೊಸದಾಗಿ ನಿರ್ಮಿಸಲಾಗಿದ್ದ ಸೇತುವೆಯ ಒಂದು ಭಾಗ ಮಂಗಳವಾರ (ಜೂನ್ 18) ಬೆಳಗ್ಗೆ ಕುಸಿದು ಬಿದ್ದಿದೆ. ಈ ಸೇತುವೆಯನ್ನು 12 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇನ್ನೂ ಉದ್ಘಾಟನೆಗೊಂಡಿರಲಿಲ್ಲ ಎಂದು ತಿಳಿದು ಬಂದಿದೆ. ಇದನ್ನೂ ಓದಿ: UP BJP: ಉತ್ತರ ಪ್ರದೇಶದಲ್ಲಿ ಬಿಜೆಪಿಯ ಹೀನಾಯ ಸೋಲಿಗೆ ಕಾರಣವೇನು? ಇಲ್ಲಿದೆ ಬಿಜೆಪಿ ಪಕ್ಷವೇ ತಯಾರಿಸಿದ ಆಂತರಿಕ ವರದಿ ಅಂದ ಹಾಗೆ, ಬಿಹಾರದ ಅರಾರಿಯಾ ಜಿಲ್ಲೆಯ ಬಕ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸೇತುವೆಯು ಕುರ್ಸಾ ಕಾಂತಾ ಮತ್ತು ಸಿಕ್ತಿ ಪ್ರದೇಶಗಳನ್ನು ಸಂಪರ್ಕಿಸುತ್ತದೆ. ಇದನ್ನು ಇತ್ತೀಚೆಗೆ ಸಿಎಂ ನಿತೀಶ್ ಕುಮಾರ್ ನೇತೃತ್ವದ ಬಿಹಾರ ರಾಜ್ಯ ಸರ್ಕಾರ ನಿರ್ಮಿಸಿತ್ತು. ಆದರೆ, ಸೇತುವೆಗೆ ತೆರಳಲು ರಸ್ತೆ ನಿರ್ಮಾಣವಾಗದ ಕಾರಣ ಇನ್ನೂ ಉದ್ಘಾಟನೆಗೊಂಡಿರಲಿಲ್ಲ. ಹಾಗಾಗಿ ಜನರು ಆ ಸೇತುವೆಯಲ್ಲಿ ಹೋಗುತ್ತಿರಲಿಲ್ಲ. ಸಿಕ್ತಿ ಬ್ಲಾಕ್ನಲ್ಲಿರುವ ಬಕ್ರಾ ನದಿಯ ಪದರಿಯಾ ಘಾಟ್ನಲ್ಲಿ 12 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದೆ. ಸೇತುವೆ ಕುಸಿತಕ್ಕೆ ಕಾರಣ ತಿಳಿದು ಬಂದಿಲ್ಲ - ಎಸ್ಪಿ ಘಟನೆ ನಡೆದ ತಕ್ಷಣ ಅರಾರಿಯಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ರಂಜನ್ ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ ಅವರು, ‘ಬಕ್ರಾ ನದಿಗೆ ನಿರ್ಮಿಸಲಾದ ಹೊಸ ಸೇತುವೆಯ ಒಂದು ಭಾಗ ಕುಸಿದಿದೆ, ಪ್ರಸ್ತುತ, ಅಧಿಕಾರಿಗಳು ಈ ಬಗ್ಗೆ ತನಿಖೆ ಮಾಡಲು ಅಲ್ಲಿಗೆ ತಲುಪಿದ್ದಾರೆ, ಆದರೆ ಸೇತುವೆ ಕುಸಿಯಲು ಕಾರಣಗಳು. ಇನ್ನೂ ತಿಳಿದುಬಂದಿಲ್ಲ’ ಎಂದು ಹೇಳಿದ್ದಾರೆ. ಇನ್ನು, ಅರಾರಿಯಾದಲ್ಲಿ ಸೇತುವೆ ಕುಸಿತದ ಕುರಿತು ಸಿಕ್ತಿ ಕ್ಷೇತ್ರದ ಶಾಸಕ ವಿಜಯ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಸೇತುವೆ ನಿರ್ಮಾಣ ಕಂಪನಿಯ ಮಾಲೀಕರ ನಿರ್ಲಕ್ಷ್ಯದಿಂದ ಈ ಸೇತುವೆ ಕುಸಿದಿದೆ. ಇಂತಹ ಸಂದರ್ಭದಲ್ಲಿ ಆಡಳಿತ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸುತ್ತೇವೆ’ ಎಂದು ಹೇಳಿದ್ದಾರೆ. ಇದನ್ನೂ ಓದಿ: Wayanad Election: ವಯನಾಡ್ನಲ್ಲಿ ಪ್ರಿಯಾಂಕಾ ಗಾಂಧಿ ವಿರುದ್ಧ ಸ್ಮೃತಿ ಇರಾನಿ ಸ್ಪರ್ಧೆ? 1999ರ ಇತಿಹಾಸವನ್ನು ಮರುಕಳಿಸುತ್ತಾ ಬಿಜೆಪಿ? ಕೇಂದ್ರ ಸಚಿವ ಹೇಳಿದ್ದೇನು? ಇನ್ನು ಬಿಹಾರದ ಅರಾರಿಯಾ ಜಿಲ್ಲೆಯ ಬಕ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸೇತುವೆ ಕುಸಿತ ಪ್ರಕರಣದ ಬಗ್ಗೆ ಇದೀಗ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಸ್ಪಷ್ಟನೆ ನೀಡಿದ್ದಾರೆ. ಬಿಹಾರದ ಅರಾರಿಯಾದಲ್ಲಿ ಕುಸಿದ ಸೇತುವೆಯನ್ನು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯದ ಅಡಿಯಲ್ಲಿ ನಿರ್ಮಿಸಲಾಗಿಲ್ಲ, ಬಿಹಾರ ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಇದರ ಕೆಲಸ ನಡೆಯುತ್ತಿತ್ತು ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಕೈತೊಳೆದುಕೊಂಡಿದ್ದಾರೆ. ಬಿಹಾರದಲ್ಲಿ ಸೇತುವೆ ಕುಸಿದಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಈ ವರ್ಷದ ಮಾರ್ಚ್ನಲ್ಲಿ ಸುಪೌಲ್ ಜಿಲ್ಲೆಯ ಕೋಸಿ ನದಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದಿತ್ತು. ಅದೇ ಸಮಯದಲ್ಲಿ, ಸುಪೌಲ್ನಲ್ಲಿ ಸೇತುವೆ ಕುಸಿದು ಒಬ್ಬ ವ್ಯಕ್ತಿ ಸಾವನ್ನಪ್ಪಿದರೆ, ಇತರ 10 ಜನರು ಗಂಭೀರವಾಗಿ ಗಾಯಗೊಂಡಿದ್ದರು. None
Popular Tags:
Share This Post:
Weight Loss: ಈ ವಿಚಾರವನ್ನು ಕಂಟ್ರೋಲ್ ಮಾಡಿದ್ರೆ ತೂಕ ಇಳಿಸೋದು ಬಲು ಸುಲಭ!
- by Sarkai Info
- October 22, 2024
What’s New
Actress: ಪ್ರಿಯಕರನಿಗಾಗಿ ಮೂರುವರೆ ವರ್ಷದ ಬಾಲಕನ ಕಿಡ್ನ್ಯಾಪ್! ನಟಿ ಅಂದರ್
- By Sarkai Info
- October 21, 2024
Spotlight
Today’s Hot
-
- October 21, 2024
-
- October 21, 2024
-
- October 21, 2024
Featured News
Latest From This Week
Snake Bite: ಹಾವು ಕಚ್ಚಿದ್ರೆ ತಪ್ಪಿಯೂ ಈ ಆರು ಕೆಲಸ ಮಾಡದಿರಿ, ಜೀವಕ್ಕೇ ಮಾರಕ! ಎಚ್ಚರ!
NEWS
- by Sarkai Info
- October 17, 2024
Subscribe To Our Newsletter
No spam, notifications only about new products, updates.