NEWS

BGT 2024-25: ಕೋಚ್​ಗಳು ಏನು ಮಾಡ್ತಿದ್ದಾರೆ, ಅವರ ತಂತ್ರಗಾರಿಕೆ ಏನು? ಈ ರೀತಿ 2 ಸರಣಿ ಸೋಲಿನ ಬಳಿಕ ಇದೇ ತಂಡ ನಮಗೆ ಅಗತ್ಯವೇ? ಗವಾಸ್ಕರ್ ಕಿಡಿ

ಗವಾಸ್ಕರ್- ಗಂಭೀರ್ ಬಾರ್ಡ್​ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ (Border Gavaskar Trophy) ಟೀಮ್ ಇಂಡಿಯಾ 10 ವರ್ಷಗಳ ಬಳಿಕ ಸೋಲು ಕಂಡಿದೆ. ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಸ್ಟ್ರೇಲಿಯಾ (Australia) 3-1ರಿಂದ ಗೆದ್ದುಕೊಂಡಿದೆ. ಸರಣಿಯನ್ನು ಕಳೆದುಕೊಂಡ ನಂತರ, ಟೀಮ್ ಇಂಡಿಯಾ (Team India) ಈಗ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ನಿಂದ (World Test Championship Final) ಮೊದಲ ಬಾರಿಗೆ ಹೊರಗುಳಿಯಲಿದೆ. ಈ ಟೆಸ್ಟ್ ಸರಣಿಯಲ್ಲಿ ಭಾರತೀಯ ಬ್ಯಾಟರ್​ಗಳು ಸಂಪೂರ್ಣ ವಿಫಲರಾದರು. ಭಾರತದ ಮಾಜಿ ಬ್ಯಾಟರ್​ ಸುನಿಲ್ ಗವಾಸ್ಕರ್ ಸೋಲಿನ ನಂತರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗವಾಸ್ಕರ್ ಗಂಭೀರ್ ಅಥವಾ ಟೀಮ್ ಇಂಡಿಯಾದ ಯಾವುದೇ ಆಟಗಾರನ ವಿರುದ್ಧ ಕೋಪವನ್ನು ವ್ಯಕ್ತಪಡಿಸಲಿಲ್ಲ, ಆದರೆ ಇಡೀ ಕೋಚಿಂಗ್ ಸಿಬ್ಬಂದಿಯ ಮೇಲೆ ಗುಡುಗಿದ್ದಾರೆ. ಕೋಚಿಂಗ್ ಸಿಬ್ಬಂದಿ ಏನು ಮಾಡುತ್ತಿದ್ದಾರೆ? ನಿಮ್ಮ ಕೋಚಿಂಗ್ ಸಿಬ್ಬಂದಿ ಏನು ಮಾಡುತ್ತಿದ್ದಾರೆ? ನೀವು ಬಂದಮೇಲೆ ಟೀಮ್ ಇಂಡಿಯಾದಲ್ಲಿ ಏನು ಸುಧಾರಣೆಯಾಗಿದೆ? ನಮಗೆ ಇಂಗ್ಲೆಂಡ್ ಪ್ರವಾಸಕ್ಕೆ ಎರಡರಿಂದ ಮೂರು ತಿಂಗಳುಗಳಿವೆ. ಆಟಗಾರರನ್ನು ಉಳಿಸಿಕೊಳ್ಳಬೇಕೇ ಎಂದು ನೀವು ಕೇಳುತ್ತೀರಿ. ಆದರೆ ಕೋಚಿಂಗ್ ಸಿಬ್ಬಂದಿಯನ್ನು ಉಳಿಸಿಕೊಳ್ಳಬೇಕೇ ಎಂದು ನೀವು ಕೇಳಬೇಕು. ಇನ್ನೂ ಮೂರು ಅಥವಾ ನಾಲ್ಕು ತಿಂಗಳು ಮಾತ್ರ ಸಮಯವಿದೆ, ಆದರೆ ನೀವು ಆರಾಮವಾಗಿದ್ದೀರಿ. ನೀವು ಈ ಸರಣಿಯ ನಂತರ ಯೋಚಿಸಬೇಕು, ನಾನು ಟೆಸ್ಟ್ ಮ್ಯಾಚ್ ಪ್ಲೇಯರ್ ಆದ್ದರಿಂದ ನಾನು ಟೆಸ್ಟ್ ಪಂದ್ಯದ ಬಗ್ಗೆ ಮಾತನಾಡಲಿದ್ದೇನೆ. ಆದ್ದರಿಂದ ನಾನು ಖಂಡಿತವಾಗಿಯೂ ಅವರಿಗೆ ಪ್ರಶ್ನೆಗಳನ್ನು ಕೇಳುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: 9999 ರನ್​ಗೆ ಔಟ್ ಆದ ಸ್ಮಿತ್! ಟೆಸ್ಟ್ ಇತಿಹಾಸದಲ್ಲಿ ಈ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ ಬ್ಯಾಟರ್​ಗಳೆಷ್ಟು? ಯಾವ ತಂತ್ರವನ್ನು ಬಳಸಲಾಯಿತು? ಆಟಗಾರರನ್ನು ಸುಧಾರಿಸಲು ನೀವು ಏನು ಮಾಡಿದ್ದೀರಿ ಎಂದು ಕೋಚಿಂಗ್ ಸಿಬ್ಬಂದಿ ಖಂಡಿತವಾಗಿಯೂ ತಿಳಿದುಕೊಳ್ಳಬೇಕು. ಇಲ್ಲಿಯವರೆಗೆ ನೀವು ಯಾವ ತಂತ್ರವನ್ನು ಬಳಸಿದ್ದೀರಾ? ಎಂದು ಸ್ಟಾರ್ಸ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಗವಾಸ್ಕರ್, ಟೀಮ್ ಇಂಡಿಯಾದ ಆಟಗಾರರನ್ನು ಹಾಗೂ ಕೋಚ್​ಗಳನ್ನ ತರಾಟೆಗೆ ತೆಗೆದುಕೊಂಡರು. ಒಂದು ಕಿವಿಯಿಂದ ಕೇಳಿ, ಇನ್ನೊಂದು ಕಿವಿಯಿಂದ ಬಿಡ್ತೀರಾ ಟೀಮ್ ಇಂಡಿಯಾದ ಬ್ಯಾಟಿಂಗ್ ಸುಧಾರಿಸಲು ನಾವು ದೇಶೀಯ ಕ್ರಿಕೆಟ್​ನಿಂದ ಆಟಗಾರರನ್ನು ಕರೆತರಬೇಕೇ? ಈ ಪ್ರಶ್ನೆ ಉತ್ತರಿಸಿದ ಗವಾಸ್ಕರ್​ ವಿಷಾದ ವ್ಯಕ್ತಪಡಿಸಿದರು. " ನಾವು ಯಾರು? ನಮಗೆ ಕ್ರಿಕೆಟ್ ಗೊತ್ತಿಲ್ಲ. ನಾವು ಕೇವಲ ಟಿವಿಗಾಗಿ ಮಾತನಾಡುತ್ತೇವೆ ಮತ್ತು ಹಣ ಸಂಪಾದಿಸುತ್ತೇವೆ, ನಮ್ಮ ಮಾತನ್ನು ಕೇಳಬೇಡಿ, ನಾವು ಅವರಿಗೆ ಏನೂ ಅಲ್ಲ. ಒಂದು ಕಿವಿಯಿಂದ ಕೇಳಿಸಿಕೊಂಡಿ, ಇನ್ನೊಂದು ಕಿವಿಯಿಂದ ಬಿಡುತ್ತಾರೆ “ಎಂದು ಸುನಿಲ್ ಗವಾಸ್ಕರ್ ಹೇಳಿದರು. ಇದನ್ನೂ ಓದಿ: ಆ ನಿಯಮಕ್ಕೆ ಬದ್ಧರಾಗಿದ್ದರೆ ಟೆಸ್ಟ್​ನಲ್ಲಿ ಅವಕಾಶ! ಕೊಹ್ಲಿ-ರೋಹಿತ್ ಭವಿಷ್ಯದ ಬಗ್ಗೆಯೂ ಗಂಭೀರ್ ಮಾತು ಗೆಲುವಿನಿಂದ ಪ್ರಾಂರಂಭಿಸಿದರೂ ಸರಣಿ ಸೋಲು ಪರ್ತ್ ಟೆಸ್ಟ್​ನಲ್ಲಿ ಭಾರತ 295 ರನ್​ಗಳ ಜಯದೊಂದಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿ 2024-25 ಅನ್ನು ಪ್ರಾರಂಭಿಸಿತು. ಅಡಿಲೇಡ್​ನಲ್ಲಿ ನಡೆದ ಹಗಲು-ರಾತ್ರಿ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ 10 ವಿಕೆಟ್​ಗಳಿಂದ ಸೋಲು ಕಂಡಿತ್ತು. ಸೋತಿದೆ. ಅದೇ ಸಮಯದಲ್ಲಿ, ಬ್ರಿಸ್ಬೇನ್ ಟೆಸ್ಟ್ ಡ್ರಾನಲ್ಲಿ ಕೊನೆಗೊಂಡಿತು. ಮೆಲ್ಬೋರ್ನ್​ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯವನ್ನು184 ರನ್ಗಳಿಂದ ಹಾಗೂ ಸಿಡ್ನಿ ಟೆಸ್ಟ್ ಪಂದ್ಯವನ್ನ 6 ವಿಕೆಟ್​ಗಳಿಂದ ಸಿಡ್ನಿ ಗೆದ್ದು ಸರಣುಯನ್ನ 3-1ರಲ್ಲಿ ಗೆದ್ದುಕೊಂಡಿತ್ತು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.