NEWS

Mandya: ಶ್ರೀರಂಗಪಟ್ಟಣದ ಚಾಮುಂಡೇಶ್ವರಿಗೆ 10 ಸಾವಿರ ಹೋಳಿಗೆಯ ಅಲಂಕಾರ!

ಇಲ್ಲಿ ವಿಡಿಯೋ ನೋಡಿ ಮಂಡ್ಯ: ಆಷಾಢ ಮಾಸದ ಮೂರನೇ ಶುಕ್ರವಾರದ ಹಿನ್ನೆಲೆ ಮಂಡ್ಯದ ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯ್ತು. 10 ಸಾವಿರ ಹೋಳಿಗೆ (Holige) ಹಾಗೂ 1 ಸಾವಿರ ಕಜ್ಜಾಯದ (Kajjaya) ಅಲಂಕಾರದಲ್ಲಿ ಕಂಗೊಳಿಸಿದ ಚಾಮುಂಡೇಶ್ವರಿಯನ್ನ ಕಂಡು ಭಕ್ತರು ಪುನೀತರಾದರು. ಆಷಾಢ ಮಾಸದ ಮೂರನೇ ಶುಕ್ರವಾರದ ಹಿನ್ನೆಲೆ ಇಂದು ಮಂಡ್ಯದ ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಪುರಸ್ಕಾರಗಳು ನೆರವೇರಿದವು. ಮುಂಜಾನೆಯಿಂದಲೇ ದೇವಿಗೆ ಪುಷ್ಪಯಾಗ ಅಂದರೆ ಸುಮಾರು 2 ಸಾವಿರ ಕೆಜಿ ಹೂಗಳಿಂದ ದೇವಿಗೆ ಪೂಜೆ ಸಲ್ಲಿಸಲಾಯಿತು. ಅಲ್ಲದೇ, 16 ರೀತಿಯ ದ್ರವ್ಯ ಅಂದರೆ ಬೆಣ್ಣೆ, ತುಪ್ಪ, ಜೇನು ತುಪ್ಪ ಸೇರಿದಂತೆ ವಿವಿಧ ದ್ರವ್ಯಗಳಿಂದ ಅಭಿಷೇಕ ನೆರವೇರಿಸಲಾಯಿತು. ಅಲ್ಲದೆ 20 ವೇದ ವಿದ್ವಾಂಸರಿಂದ ವೇಧ ಪಾರಾಯಣ ಮಾಡಿ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಗಿದೆ. ಇದನ್ನೂ ಓದಿ: Rain Effect: ದುಡ್ಡು ಕೊಟ್ಟು ಮೊಬೈಲ್‌ ಚಾರ್ಜ್‌ ಮಾಡಿಕೊಳ್ತಿದ್ದಾರೆ ಮೂಡಿಗೆರೆ ಜನ; ಶಾಮಿಯಾನ ಅಂಗಡಿಯೇ ಚಾರ್ಜಿಂಗ್‌ ಸೆಂಟರ್! ಇನ್ನು ಈ ಬಾರಿ ವಿಶೇಷ ಅಂದ್ರೆ ದೇವಿ ಚಾಮುಂಡಿಗೆ 10 ಸಾವಿರ ಹೋಳಿಗೆ ಹಾಗೂ 1 ಸಾವಿರ ಕಜ್ಜಾಯಗಳಿಂದ ಅಲಂಕಾರ ಮಾಡಲಾಗಿತ್ತು. ಚಾಮುಂಡಿ ತಾಯಿ ಬೆಲ್ಲ ಪ್ರಿಯಳಾಗಿದ್ದು, ಬೆಲ್ಲದಿಂದ ಸಿದ್ದಪಡಿಸಿದ ಹೋಳಿಗೆಯನ್ನ ದೇವಿಗೆ ಅರ್ಪಿಸಿ ವಿಶೇಷ ಪೂಜೆ ನೆರವೇರಿಸಲಾಯ್ತು. ಇದನ್ನೂ ಓದಿ: Yellapur Police: 42 ವರ್ಷಗಳ ಹಿಂದಿನ ಪ್ರಕರಣ ಬೇಧಿಸಿದ ಪೊಲೀಸ್;‌ ಕಳ್ಳನ ಅರೆಸ್ಟ್‌ಗೆಂದು ಹೋದಾಗ ಕಾದಿತ್ತು ಶಾಕ್! ಭಕ್ತರಿಗೆ ವಿತರಣೆ! ಇನ್ನು ದೇವಿ ಅಲಂಕಾರಕ್ಕೆ ಬಳಸಿದ ಹೋಳಿಗೆಗಳನ್ನ ನಾಳೆ ಭಕ್ತರಿಗೆ ಪ್ರಸಾದವಾಗಿ ವಿತರಣೆ ಮಾಡಲಾಗುತ್ತೆ. ಇನ್ನು ದೇವಿ ದರ್ಶನಕ್ಕೆ ಮೈಸೂರು, ಮಂಡ್ಯ ಸೇರಿದಂತೆ ಅಕ್ಕ ಪಕ್ಕದ ಜಿಲ್ಲೆಗಳಿಂದ ಆಗಮಿಸಿದ್ದು, ಬೆಳಗ್ಗಿನಿಂದ ಸರತಿ ಸಾಲಿನಲ್ಲಿ ನಿಂತು ದೇವರನ್ನ ಕಣ್ತುಂಬಿಕೊಂಡಿದ್ದಾರೆ. ಕನ್ನಡ ಸುದ್ದಿ / ನ್ಯೂಸ್ / ಭವಿಷ್ಯ / Mandya: ಶ್ರೀರಂಗಪಟ್ಟಣದ ಚಾಮುಂಡೇಶ್ವರಿಗೆ 10 ಸಾವಿರ ಹೋಳಿಗೆಯ ಅಲಂಕಾರ! Mandya: ಶ್ರೀರಂಗಪಟ್ಟಣದ ಚಾಮುಂಡೇಶ್ವರಿಗೆ 10 ಸಾವಿರ ಹೋಳಿಗೆಯ ಅಲಂಕಾರ! ಇಲ್ಲಿ ವಿಡಿಯೋ ನೋಡಿ ಆಷಾಢ ಮಾಸದ ಮೂರನೇ ಶುಕ್ರವಾರ ಹಿನ್ನೆಲೆ ಶ್ರೀರಂಗಪಟ್ಟಣದ ಚಾಮುಂಡೇಶ್ವರಿಗೆ ಹೋಳಿಗೆ ಅಲಂಕಾರ ಮಾಡಲಾಯಿತು. ಮುಂದೆ ಓದಿ … 2-MIN READ Kannada Last Updated : July 26, 2024, 7:07 pm IST Whatsapp Facebook Telegram Twitter Follow us on Follow us on google news Published By : Irshad Kinnigoli Reported By : Pooja MS ಸಂಬಂಧಿತ ಸುದ್ದಿ ಮಂಡ್ಯ: ಆಷಾಢ ಮಾಸದ ಮೂರನೇ ಶುಕ್ರವಾರದ ಹಿನ್ನೆಲೆ ಮಂಡ್ಯದ ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯ್ತು. 10 ಸಾವಿರ ಹೋಳಿಗೆ (Holige) ಹಾಗೂ 1 ಸಾವಿರ ಕಜ್ಜಾಯದ (Kajjaya) ಅಲಂಕಾರದಲ್ಲಿ ಕಂಗೊಳಿಸಿದ ಚಾಮುಂಡೇಶ್ವರಿಯನ್ನ ಕಂಡು ಭಕ್ತರು ಪುನೀತರಾದರು. ಆಷಾಢ ಮಾಸದ ಮೂರನೇ ಶುಕ್ರವಾರದ ಹಿನ್ನೆಲೆ ಇಂದು ಮಂಡ್ಯದ ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಪುರಸ್ಕಾರಗಳು ನೆರವೇರಿದವು. ಮುಂಜಾನೆಯಿಂದಲೇ ದೇವಿಗೆ ಪುಷ್ಪಯಾಗ ಅಂದರೆ ಸುಮಾರು 2 ಸಾವಿರ ಕೆಜಿ ಹೂಗಳಿಂದ ದೇವಿಗೆ ಪೂಜೆ ಸಲ್ಲಿಸಲಾಯಿತು. ಜಾಹೀರಾತು ಅಲ್ಲದೇ, 16 ರೀತಿಯ ದ್ರವ್ಯ ಅಂದರೆ ಬೆಣ್ಣೆ, ತುಪ್ಪ, ಜೇನು ತುಪ್ಪ ಸೇರಿದಂತೆ ವಿವಿಧ ದ್ರವ್ಯಗಳಿಂದ ಅಭಿಷೇಕ ನೆರವೇರಿಸಲಾಯಿತು. ಅಲ್ಲದೆ 20 ವೇದ ವಿದ್ವಾಂಸರಿಂದ ವೇಧ ಪಾರಾಯಣ ಮಾಡಿ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಗಿದೆ. ಇದನ್ನೂ ಓದಿ: Rain Effect: ದುಡ್ಡು ಕೊಟ್ಟು ಮೊಬೈಲ್‌ ಚಾರ್ಜ್‌ ಮಾಡಿಕೊಳ್ತಿದ್ದಾರೆ ಮೂಡಿಗೆರೆ ಜನ; ಶಾಮಿಯಾನ ಅಂಗಡಿಯೇ ಚಾರ್ಜಿಂಗ್‌ ಸೆಂಟರ್! ಇನ್ನು ಈ ಬಾರಿ ವಿಶೇಷ ಅಂದ್ರೆ ದೇವಿ ಚಾಮುಂಡಿಗೆ 10 ಸಾವಿರ ಹೋಳಿಗೆ ಹಾಗೂ 1 ಸಾವಿರ ಕಜ್ಜಾಯಗಳಿಂದ ಅಲಂಕಾರ ಮಾಡಲಾಗಿತ್ತು. ಚಾಮುಂಡಿ ತಾಯಿ ಬೆಲ್ಲ ಪ್ರಿಯಳಾಗಿದ್ದು, ಬೆಲ್ಲದಿಂದ ಸಿದ್ದಪಡಿಸಿದ ಹೋಳಿಗೆಯನ್ನ ದೇವಿಗೆ ಅರ್ಪಿಸಿ ವಿಶೇಷ ಪೂಜೆ ನೆರವೇರಿಸಲಾಯ್ತು. ಜಾಹೀರಾತು ಮಹೀಂದ್ರಾ ಕಂಪೆನಿಗೆ ಅಚ್ಚರಿ ಮೂಡಿಸಿದ ಸುಳ್ಯ ತಾಲೂಕು! ಇನ್ನಷ್ಟು ಸುದ್ದಿ… ಇದನ್ನೂ ಓದಿ: Yellapur Police: 42 ವರ್ಷಗಳ ಹಿಂದಿನ ಪ್ರಕರಣ ಬೇಧಿಸಿದ ಪೊಲೀಸ್;‌ ಕಳ್ಳನ ಅರೆಸ್ಟ್‌ಗೆಂದು ಹೋದಾಗ ಕಾದಿತ್ತು ಶಾಕ್! ಭಕ್ತರಿಗೆ ವಿತರಣೆ! ಇನ್ನು ದೇವಿ ಅಲಂಕಾರಕ್ಕೆ ಬಳಸಿದ ಹೋಳಿಗೆಗಳನ್ನ ನಾಳೆ ಭಕ್ತರಿಗೆ ಪ್ರಸಾದವಾಗಿ ವಿತರಣೆ ಮಾಡಲಾಗುತ್ತೆ. ಇನ್ನು ದೇವಿ ದರ್ಶನಕ್ಕೆ ಮೈಸೂರು, ಮಂಡ್ಯ ಸೇರಿದಂತೆ ಅಕ್ಕ ಪಕ್ಕದ ಜಿಲ್ಲೆಗಳಿಂದ ಆಗಮಿಸಿದ್ದು, ಬೆಳಗ್ಗಿನಿಂದ ಸರತಿ ಸಾಲಿನಲ್ಲಿ ನಿಂತು ದೇವರನ್ನ ಕಣ್ತುಂಬಿಕೊಂಡಿದ್ದಾರೆ. Whatsapp Facebook Telegram Twitter Follow us on Follow us on google news ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ Tags: Chamundi Temple , Local 18 , Mandya , Srirangapatna First Published : July 26, 2024, 7:07 pm IST ಮುಂದೆ ಓದಿ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.